ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಹೂ ಮಾರುತ್ತಿದ್ದ ಬಾಲಕಿಯ ಕಷ್ಟ ಆಲಿಸಿದ ಸಿಎಂ ಎಚ್‍ಡಿಕೆ

ಮಂಡ್ಯ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾರ್ಗ ಮಧ್ಯೆ ತಮ್ಮ ಕಾರನ್ನು ನಿಲ್ಲಿಸಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯ ಕಷ್ಟವನ್ನು ಆಲಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಇಂದು ಸಿಎಂ ಕುಮಾರಸ್ವಾಮಿ ಕೆ.ಆರ್.ಎಸ್ ನಿಂದ ರಾಮನಗರಕ್ಕೆ ಹೋಗುತ್ತಿದ್ದರು. ಅದೇ ಮಾರ್ಗ ಮಧ್ಯೆ ಬೆಳಗೊಳ ಗ್ರಾಮದ ಶ್ರೀರಂಗಪಟ್ಟಣದ ರಸ್ತೆ ಬದಿಯಲ್ಲಿ ಹೂವನ್ನು ಮಾರುತ್ತ ಶಾಬಾಬ್ತಾಜ್ ಬಾಲಕಿ ಕುಳಿತ್ತಿದ್ದಳು. ಈ ವೇಳೆ ಕುಮಾರಸ್ವಾಮಿ ಹೂ ಮಾರುತ್ತಾ ಕುಳಿತ್ತಿದ್ದ ಬಾಲಕಿಯನ್ನು ನೋಡಿ ರಸ್ತೆ ಮಧ್ಯೆಯೇ ಆಕೆಯ ಬಳಿ ಕಾರನ್ನ ನಿಲ್ಲಿಸಿ ಮಾತನಾಡಿದ್ದಾರೆ.

ಬಾಲಕಿ ತಮ್ಮ ಮನೆಯ ಸಂಕಷ್ಟವನ್ನು ಕುಮಾರಸ್ವಾಮಿಗೆ ಹೇಳಿಕೊಂಡಿದ್ದಾಳೆ. ಬಳಿಕ ಬಾಲಕಿಯ ಕಷ್ಟವನ್ನು ಆಲಿಸಿದ ಸಿಎಂ ಗ್ರಾಮಸ್ಥರಿಗೆ ಆಕೆಯ ತಂದೆಗೆ ತನ್ನನ್ನು ಕಾಣುವಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕುಮಾರಸ್ವಾಮಿ ಅವರು ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿ ರಾಮನಗರಕ್ಕೆ ತೆರಳಿದ್ದಾರೆ. ಇತ್ತ ಗ್ರಾಮಸ್ಥರು ಕೂಡು ಸಿಎಂ ಅವರ ಸರಳತೆಯನ್ನ ಕಂಡು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿಯವರು ಇಂದು ತಮ್ಮ ತವರು ಕ್ಷೇತ್ರವಾದ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಆಲಿಕೆ ಹಾಗೂ ಅಹವಾಲು ಸ್ವೀಕರಿಸಲು ಹೋಗಿದ್ದರು. ಹೋಬಳಿವಾರು ನಡೆಸಿರುವ ಜನತಾದರ್ಶನ ಕಾರ್ಯಕ್ರಮದಲ್ಲಿ ಮೊದಲಿಗೆ ಕೈಲಾಂಚ ಗ್ರಾಮದಲ್ಲಿ ನಡೆಸಿದರು. ಕೈಲಾಂಚದಲ್ಲಿ ಈಗಾಗಲೇ 10 ಕೌಂಟರ್ ಗಳ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕಾರ ಮಾಡಲಾಗುತ್ತಿದೆ.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ನಾಳೆಗೆ ಸಮ್ಮಿಶ್ರ ಸರ್ಕಾರ ನೂರು ದಿನವನ್ನು ಪೂರೈಸಲಿದೆ. ನೂತನವಾಗಿ ಹೊಸ ಯೋಜನೆಗಳನ್ನ ಅನುಷ್ಠಾನಕ್ಕೆ ತರಬೇಕು. ನಮ್ಮದೇ ಆದ ಯೋಜನೆಗಳು ಇವೆ. ಅವುಗಳನ್ನು ಸೆಪ್ಟೆಂಬರ್ ತಿಂಗಳಿಂದ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಲಾಗುವುದು. ಸಮಯ ವ್ಯರ್ಥ ಮಾಡದೇ ರಾಜ್ಯದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *