ನಾನು ಸರ್ಕಾರ ನಡೆಸಬೇಕೇ? ಬೇಡವೇ? – ಸಂಪುಟ ಸಭೆಯಲ್ಲಿ ಸಿಎಂ ಕೆಂಡಾಮಂಡಲ

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದು, ಕಾಂಗ್ರೆಸ್ ನಾಯಕರ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವಾರದಿಂದ ಸರ್ಕಾರದ ವಿರುದ್ಧ ನಿಮ್ಮ ಮುಖಂಡರು ಮಾತನಾಡುತ್ತಿದ್ದಾರೆ. ನಾನು ಸರ್ಕಾರ ನಡೆಸಬೇಕೋ? ಬೇಡವೇ? ಬಾಯಿಗೆ ಬಂದಂತೆ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಸಿಎಂ ಕಾಂಗ್ರೆಸ್ ಸಚಿವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ನನ್ನನ್ನು ಸಿಎಂ ಮಾಡಿ ಎಂದು ನಾನು ಯಾರ ಮನೆ ಹತ್ತಿರ ಹೋಗಿರಲಿಲ್ಲ. ಸಮಸ್ಯೆಗಳು ಯಾವುದೇ ಇದ್ದರೂ ನೇರವಾಗಿ ಬಂದು ನನ್ನ ಬಳಿ ಬಂದು ಮಾತನಾಡಲಿ. ಅದನ್ನ ಬಿಟ್ಟು ಹಾದಿಬೀದಿಯಲ್ಲಿ ನನ್ನ ಬಗ್ಗೆ ಮಾತನಾಡಿದರೆ ನಾವು ಸುಮ್ಮನಿರಲ್ಲ ಎಂದು ಸಿಎಂ ಗರಂ ಆಗಿಯೇ ಹೇಳಿದ್ದಾರೆ.

ನೀವು ನಿಮ್ಮ ಮುಖಂಡರನ್ನು ಹದ್ದುಬಸ್ತಿನಲ್ಲಿಡಿ ಎಂದು ಕೈ ನಾಯಕರಿಗೆ ಸಿಎಂ ಈ ವೇಳೆ ತಾಕೀತು ಮಾಡಿದ್ದಾರೆ. ಸಿಎಂ ಕೋಪಕ್ಕೆ ಸಭೆಯಲ್ಲಿದ್ದ ಕಾಂಗ್ರೆಸ್ ಸಚಿವರು ಗಪ್ ಚುಪ್ ಆಗಿ ಕುಳಿತಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *