ಕೆ.ಜೆ ಜಾರ್ಜ್ ವಿರುದ್ಧ ಸಿಎಂ ಅಸಮಾಧಾನ

ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್ ವಿರುದ್ಧ ಸಿಎಂ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಕಣ್ಣ ಮುಂದೆಯೇ ಅತೃಪ್ತ ಶಾಸಕರು ಪ್ಲೈಟ್ ಹತ್ತಿದರೂ ಒಬ್ಬರನ್ನೂ ತಡೆಯುವ ಪ್ರಯತ್ನ ಇರಲಿ ಮಾತನಾಡಿಸುವ ಪ್ರಯತ್ನ ಕೂಡ ಮಾಡಿಲ್ಲ ಎಂದು ಸಿಎಂ ಅವರು ಕೆ.ಜೆ ಜಾರ್ಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಣ್ಣ ಮುಂದೆಯೇ ಅಷ್ಟು ಶಾಸಕರು ವಿಮಾನ ಹತ್ತಿದ್ದರೂ ಜಾರ್ಜ್ ಏಕೆ ಸುಮ್ಮನಿದ್ದರು. ಅವರನ್ನು ನೋಡಿ ಓಡಿ ಹೋಗುತ್ತಿದ್ದ ಶಾಸಕರನ್ನು ಅವರು ಏಕೆ ತಡೆಯಲಿಲ್ಲ. ತಡೆಯೋದು ಬೇಡ ಕನಿಷ್ಟ ಪಕ್ಷ ಅವರನ್ನು ಮಾತನಾಡಿಸದೇ ತಮ್ಮ ಪಾಡಿಗೆ ತಾವು ಬಂದಿದ್ದು ಸರಿಯಲ್ಲ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ.

ಶನಿವಾರ ಅತೃಪ್ತ ಶಾಸಕರು ವಿಮಾನ ಹತ್ತುವ ಮುನ್ನ ಕೆ.ಜೆ ಜಾರ್ಜ್ ಮತ್ತೊಂದು ವಿಮಾನದಲ್ಲಿ ಎಚ್‍ಎಎಲ್‍ಗೆ ಬಂದಿದ್ದರು. ಜಾರ್ಜ್ ವಿಮಾನ ಇಳಿದಿದ್ದನ್ನು ನೋಡಿದ ಶಾಸಕರು ಅವಿತುಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಜಾರ್ಜ್ ಯಾರೊಬ್ಬರನ್ನೂ ಮಾತನಾಡಿಸದೇ ತಮ್ಮ ಪಾಡಿಗೆ ಕಾರು ಏರಿ ಹೊರಟ್ಟಿದ್ದರು.

Comments

Leave a Reply

Your email address will not be published. Required fields are marked *