ಬರೀ ಕೋಣ, ಎಮ್ಮೆ ಹತ್ರ ಗುದ್ದಿಸ್ಕೋ: ರೇಣುಕಾಚಾರ್ಯ ವಿರುದ್ಧ ಬಿಎಸ್‌ವೈ ಗರಂ

ಬೆಂಗಳೂರು: ಬಿಜೆಪಿ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೂಗುಚ್ಚ ಕೊಡಲು ಹೋಗಿ ಶಾಸಕ ಎಂ.ಪಿ.ರೇಣುಕಾಚರ್ಯ ಬೈಗುಳ ತಿಂದ ಪ್ರಸಂಗ ಇಂದು ನಡೆದಿದೆ.

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದರು. ಇದಕ್ಕೂ ಮುನ್ನ ಶಾಸಕ ರೇಣುಕಾಚಾರ್ಯ ತಮ್ಮ ಆಪ್ತ ಸಹಾಯಕನ ಜೊತೆ ಸಿಎಂ ಯಡಿಯೂರಪ್ಪ ಅವರ ಕೊಠಡಿಗೆ ಹೋಗಿದ್ದರು. ಆದರೆ ಅಲ್ಲಿ ಸಿಎಂ ಬ್ಯುಸಿ ಇದ್ದಿದ್ದರಿಂದ ಹೂಗುಚ್ಚ ಕೊಡಲು ಆಗಿರಲಿಲ್ಲ. ಇದನ್ನೂ ಓದಿ: ಹೊನ್ನಾಳಿ ಹೋರಿ ರೇಣುಕಾಚಾರ್ಯಗೆ ಡಿಚ್ಚಿ ಹೊಡೆದ ರಿಯಲ್ ಹೋರಿ

ಸಿಎಂ ಸುದ್ದಿಗೋಷ್ಠಿ ನಡೆಸಿದಾಗ ಮಧ್ಯೆ ಪ್ರವೇಶಿಸಿದ ಶಾಸಕ ರೇಣುಕಾಚಾರ್ಯ ಅವರು ಹೂಗುಚ್ಚ ಕೊಡಲು ಮುಂದಾಗಿದ್ದರು. ಇದರಿಂದ ಗರಂ ಆದ ಸಿಎಂ ಯಡಿಯೂರಪ್ಪ, ಏನೋ ನೀನೇನೋ ಮಧ್ಯದಲ್ಲಿ ಬಂದು ಹಿಡ್ಕೊಂಡು ನಿಂತಿದ್ದಿಯಲ್ಲೋ. ಕೊಡೋ ಹಾಗಿದ್ದರೆ ಕೊಡಲೇ. ಅಲ್ಲಿ ಊಟ ಮಾಡ್ತ ಇದ್ದೇ ತಾನೇ ಮಾಡ ಹೋಗ. ಬರೀ ಕೋಣ, ಎಮ್ಮೆ ಹತ್ರ ಗುದ್ದಿಸ್ಕೋ ಎಂದು ಹೇಳಿದರು.

ಸಿಎಂಗೆ ಅಭಿನಂದನೆ ಹೇಳುವ ಧಾವಂತದಲ್ಲಿ ಬೈಗುಳ ಕೇಳುವಂತಾಗಿದ್ದಕ್ಕೆ ರೇಣುಕಾಚಾರ್ಯ ಅವರು ತಮ್ಮನ್ನೇ ಶಪಿಸಿಕೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ರೇಣುಕಾಚಾರ್ಯ ವಿರುದ್ಧ ವ್ಯಂಗ್ಯವಾಡಿದ್ದನ್ನು ಕೇಳಿದ ಕೆಲವರು ನಗಲು ಆರಂಭಿಸಿದರು. ಇದರಿಂದಾಗಿ ಶಾಸಕರು ಮತ್ತಷ್ಟು ಮುಜುಗುರಕ್ಕೆ ಒಳಗಾದರು.

Comments

Leave a Reply

Your email address will not be published. Required fields are marked *