ಸಿಎಂ ಗಾದಿಗೇರಿದ್ರೂ ಬಿಎಸ್‍ವೈಗೆ ತಪ್ಪಿಲ್ಲ ಟೆನ್ಶನ್

ಬೆಂಗಳೂರು: ಮೈತ್ರಿ ಸರ್ಕಾರ ಬೀಳಿಸಿದ್ದಾಯ್ತು, ಸಿಎಂ ಆಗಿದ್ದೂ ಆಯ್ತು. ಆದರೆ ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಮಾಡುವ ತನಕ ಆತಂಕ ತಪ್ಪಿಲ್ಲ.

ಹೌದು. ಬಿಎಸ್‍ವೈ ಅವರಿಗೆ ರಿವರ್ಸ್ ಆಪರೇಷನ್ ನದ್ದೇ ಭಯವಂತೆ. ಹೀಗಾಗಿ ಅವರು ಸೂಪರ್ ಪ್ಲಾನ್ ಒಂದನ್ನು ಸಿದ್ಧ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸೋಮವಾರ ಸದನದಲ್ಲಿ ಬಹುಮತ ತೋರಿಸಲು ಬಿಎಸ್‍ವೈ ಪ್ಲಾನ್ ರೂಪಿಸಿದ್ದಾರೆ. ತಮ್ಮದೇ ಪಕ್ಷದ ಶಾಸಕರ ಕಾವಲಿಗೆ ಕಾವಲುಗಾರರನ್ನು ನೇಮಿಸಿದ್ದಾರೆ. 105 ಜನ ಶಾಸಕರ ಮೇಲೆ ಕಣ್ಗಾವಲಿಡಲು ಕಾವಲುಗಾರರನ್ನು ನೇಮಕ ಮಾಡಿದ್ದಾರೆ ಎನ್ನಲಾಗಿದೆ.

ತಲಾ 10 ಶಾಸಕರಿಗೆ ಒಬ್ಬ ಕಾವಲುಗಾರ ಮುಖಂಡನನ್ನು ನೇಮಿಸುವ ಮೂಲಕ ನಂಬಿಕಸ್ತ ಆಪ್ತರನ್ನೇ ಕಾವಲುಗಾರರಾಗಿ ನೇಮಿಸಿದ್ದಾರೆ. ಶಾಸಕರು ಈ ಕಾವಲುಗಾರರ ಕಣ್ಣಳತೆಯಲ್ಲೇ ಇರಬೇಕೆಂದು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಸ್‍ವೈ ಅವರು ಸೋಮವಾರ ಬಹುಮತ ಸಾಬೀತು ಪಡಿಸೋವರೆಗೂ ಕಾವಲುಗಾರ ಮುಖಂಡರ ಸುಪರ್ದಿಯಲ್ಲೇ ಇರುತ್ತಾರಂತೆ. ಅಲ್ಲದೆ ಮೈತ್ರಿ ಪಕ್ಷಗಳ ಯಾವ ನಾಯಕನಿಗೂ ಪಕ್ಷದ ಶಾಸಕರು ಸಿಗದಂತೆಯೂ ಎಚ್ಚರಿಕೆ ವಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *