ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ- ಬೀದರಿನಲ್ಲಿ ಬೃಹತ್ ರ‍್ಯಾಲಿ

ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ, ಸೋಮವಾರ ಗಡಿ ಜಿಲ್ಲೆ ಬೀದರಿನಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

ವಿವಿಧ ಸಂಘಟನೆಗಳನ್ನೊಳಗೊಂಡ ಜಾತ್ಯಾತೀತ ನಾಗರಿಕ ವೇದಿಕೆಯ ಜಿಲ್ಲಾ ಸಮಿತಿಯಿಂದ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ಸಮಿತಿ ವತಿಯಿಂದ ನಾಳೆ ಶಾಂತಿಯುತವಾಗಿ ಬೃಹತ್ ರ‍್ಯಾಲಿ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸೋಮವಾರ ಬೆಳಗ್ಗೆ 11 ಗಂಟೆಗೆ ನಗರದ ಚೌಬಾರ್, ಶಾಹಗಾಂಜ್, ಮಹಮ್ಮದ್ ಗವಾನ್, ಅಂಬೇಡ್ಕರ್ ವೃತಗಳಲ್ಲಿ ಬೃಹತ್ ರ‍್ಯಾಲಿ ಮಾಡಲಿ ನಡೆಯಲಿದೆ. ನಂತರ ಅಂಬೇಡ್ಕರ್ ವೃತದಲ್ಲಿ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ್ ಅವರಿಗೆ ಮನವಿ ಸಲ್ಲಿಸಲಿದ್ದೇವೆ. ಮನವಿ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಮಾಡುವುದಾಗಿ ಮುಖಂಡರು ತಿಳಿಸಿದ್ದಾರೆ.

ಜಾತಿ, ಧರ್ಮ ಎನ್ನದೆ ಸಾವಿರಾರು ಜನ ಸಮಾನ ವಯಸ್ಕರು ಸೇರಲಿದ್ದಾರೆ ಎಂದು ಜಾತ್ಯಾತೀತ ನಾಗರಿಕರ ಸಮಿತಿ ಕಾರ್ಯದರ್ಶಿ ಶ್ರಿಕಾಂತ್ ಸ್ವಾಮಿ ವಿವರಿಸಿದರು.

Comments

Leave a Reply

Your email address will not be published. Required fields are marked *