ಕೇವಲ 2 ರೂಪಾಯಿಗಾಗಿ ಅಂಗಡಿಯವನಿಗೆ ಚಾಕುವಿನಿಂದ ಇರಿದ!

ಲುಧಿಯಾನ: ಕೇವಲ 2 ರೂಪಾಯಿಗಾಗಿ ನಡೆದ ಜಗಳದಲ್ಲಿ ಗ್ರಾಹಕನೊಬ್ಬ ಅಂಡಗಿಯವನಿಗೆ ಚಾಕುವಿನಿಂದ ಇರಿದ ಘಟನೆ ಪಂಜಾಬ್‍ನ ಸರಾಬಾ ನಗರದಲ್ಲಿ ನಡೆದಿದೆ.

ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ರೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ರೋಹಿತ್‍ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೋಮವಾರ ಸಂಜೆ ನನ್ನ ಸಂಬಂಧಿಯಾದ ರೋಹಿತ್ ಕುಮಾರ್ ಸಹಾಯ ಮಾಡಲೆಂದು ಅಂಗಡಿಗೆ ಬಂದರು. ಆಗ ಒಬ್ಬ ಗ್ರಾಹಕ ಬಂದು ಸಿಗರೇಟ್ ಖರೀದಿಸಿ 10 ರೂ. ಕೊಟ್ಟ. ಇನ್ನೂ 2 ರೂ. ಕೊಡಬೇಕು ಎಂದು ರೋಹಿತ್ ಕೇಳಿದ. ಆದ್ರೆ ಆ ಗ್ರಾಹಕ 2 ರೂ. ಕೊಡಲು ನಿರಾಕರಿಸಿದ. ಇಬ್ಬರ ನಡುವೆ ವಾಗ್ವಾದ ನಡೆದು ಗ್ರಾಹಕ ಚಾಕವಿನಿಂದ ರೋಹಿತ್‍ಗೆ ಇರಿದು ಪರಾರಿಯಾದ ಎಂದು ಅಂಗಡಿ ಮಾಲೀಕ ಸುನಿಲ್ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಸರಾಬಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಹತ್ತಿರದ ಸಿಸಿಟಿವಿಗಳನ್ನ ಪರೀಶೀಲನೆ ಮಾಡ್ತಿದ್ದಾರೆ.

Comments

Leave a Reply

Your email address will not be published. Required fields are marked *