ಕಲಬುರಗಿ: ಮದ್ಯ ನಿಷೇಧದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಭಾರಿ ಚರ್ಚೆ ಆಯ್ತು. ಆದ್ರೆ ಸಂಪೂರ್ಣ ನಿಷೇಧ ಅಸಾಧ್ಯ ಅಂತ ಸಿಎಂ ಸಿದ್ದರಾಮಯ್ಯ ಘೋಷಿಸಿದ್ರು. ಕಲಬುರಗಿಯ ಚಿಂಚೋಳಿ ತಾಲೂಕಿನ ನೀಮಾಹೊಸಳ್ಳಿ ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದೆಯೇ ಮದ್ಯ ಬ್ಯಾನ್ ಆಗಿದೆ.
ಈ ಗ್ರಾಮದಲ್ಲಿ 2 ಸಾವಿರ ಜನಸಂಖ್ಯೆಯಿದ್ದು, ಯಾರೂ ದುಶ್ಚಟಕ್ಕೆ ದಾಸರಾಗಿಲ್ಲ. ನೂರಾರು ವರ್ಷಗಳಿಂದಲೂ ಈ ನಿಯಮವನ್ನ ಗ್ರಾಮಸ್ಥರು ಪಾಲಿಸಿಕೊಂಡು ಬರುತ್ತಿದ್ದಾರೆ. ಮದ್ಯದ ಜೊತೆಗೆ ಎಲ್ಲಾ ರೀತಿಯ ಜೂಜಾಟಕ್ಕೂ ಇಲ್ಲಿ ಬ್ರೇಕ್ ಹಾಕಲಾಗಿದೆ.
ಮಂದಿರ, ಮಸೀದಿ ಮೇಲೆ ಭಾರೀ ನಂಬಿಕೆ ಹೊಂದಿರೋ ಗ್ರಾಮಸ್ಥರು ಮದ್ಯ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಅಂದಹಾಗೆ ಕೆಲ ದುಷ್ಟ ಶಕ್ತಿಗಳು ಗ್ರಾಮದ ಹೊರವಲಯದಲ್ಲಿ ಸಾರಾಯಿ ಅಂಗಡಿ ಓಪನ್ ಮಾಡಿದ್ರಂತೆ. ಈ ವೇಳೆ, ಇಡೀ ಗ್ರಾಮಸ್ಥರು ಒಗ್ಗೂಡಿ, ತೆರವು ಮಾಡಿಸಿದ್ದಾರೆ.
ನೀಮಾ ಹೊಸಳ್ಳಿಯನ್ನ ಕಂಡ ಚಿಂಚೋಳಿ ತಾಲೂಕಿನ ಇತರೆ ಹಳ್ಳಿಗಳ ಜನ ಇದನ್ನ ಅನುಸರಿಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ, ಮದ್ಯವನ್ನ ನಿಷೇಧ ಮಾಡೋಕೆ ಆಗಲ್ಲ ಅಂತಿರೋ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತೆ ಈ ಗ್ರಾಮಸ್ಥರ ನಿರ್ಧಾರ ಇದೆ.
https://www.youtube.com/watch?v=S_gpuS7h1AI







Leave a Reply