ಮಕ್ಕಳಿಗೆ ಬೇಡವಾದ ಹೆತ್ತ ತಾಯಿ – ಗಂಗಾವತಿಯಲ್ಲೊಂದು ಹೃದಯವಿದ್ರಾವಕ ಘಟನೆ

ಕೊಪ್ಪಳ: ಹೆತ್ತ ತಾಯಿಯನ್ನು ಮಕ್ಕಳಿಬ್ಬರು ದೂರ ಮಾಡಿರುವ ಹೃದಯವಿದ್ರಾವಕ ಘಟನೆ ಗಂಗಾವತಿಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿರುವ ಗುರುನಾಥ್ ತನ್ನ ತಾಯಿ 95 ವರ್ಷದ ಶಾರದಾಬಾಯಿಯನ್ನು ಖಾಸಗಿ ಬಸ್ ಮೂಲಕ ಗಂಗಾವತಿ ಗೆ ಕಳುಹಿಸಿದ್ದಾರೆ. ಈ ವೇಳೆ ಗಂಗಾವತಿಯಲ್ಲಿರುವ ಸಹೋದರ ಸುರೇಶ್ ತಾಯಿಯನ್ನು ಕರೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದಾರೆ.

ಬಸ್ ಗಂಗಾವತಿಗೆ ನಿಲ್ದಾಣಕ್ಕೆ ಆಗಮಿಸಿದಾಗ ಸುರೇಶ್ ಸ್ಥಳದಲ್ಲಿ ಇರಲಿಲ್ಲ. ಈ ವೇಳೆ ಬಸ್ ಸಿಬ್ಬಂದಿ ಸುರೇಶ್ ಅವರಿಗೆ ಕರೆ ಮಾಡಿದಾಗ ನನಗೆ ಆ ಮಹಿಳೆ ಯಾರು ಎನ್ನುವುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

ವೃದ್ಧೆ ತಾಯಿ ಖಾಸಗಿ ಬಸ್ ನಲ್ಲೇ ಕಳೆದ ಐದು ಗಂಟೆಗಳಿಂದ ಪರದಾಡಿದ್ದಾರೆ. ಇದನ್ನು ಗಮನಿಸಿದ ಖಾಸಗಿ ಬಸ್ ಚಾಲಕರು ವೃದ್ಧೆಗೆ ಉಪಹಾರ ಕೊಟ್ಟು ಮಾನವೀಯತೆ ತೋರಿದ್ದಾರೆ. ವೃದ್ಧೆ ಅಸ್ವಸ್ಥಗೊಂಡಿದ್ದು, ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಗುರುನಾಥ್ ಮತ್ತು ಸುರೇಶ್ ಅವರಿಗೆ ಫೋನ್ ಮಾಡಿದಾಗ ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಚಾಲಕ ಕಳಕಪ್ಪ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *