ಇಲ್ಲಿ ನಿಮ್ಮ ನೆಚ್ಚಿನ ಬ್ರ್ಯಾಂಡ್ ಮದ್ಯವೇ ದೇವರಿಗೆ ಎಡೆ

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಮೂರ್ಮನೆ ಗ್ರಾಮದ ಕೊರಗಜ್ಜ ಮದ್ಯಪಾನ ಬಿಡಿಸೋದರಲ್ಲಿ ಫೇಮಸ್. ನಿಮ್ಮ ಕುಟುಂಬದವರಿಗೆ ಮದ್ಯ ಸೇವನೆ ಬಿಡಿಸಬೇಕು ಎಂದ್ರೆ ನೀವು ಅವರು ಕುಡಿಯುವ ಬ್ರ್ಯಾಂಡ್ ಇಲ್ಲಿಯ ದೇವರಿಗೆ ಎಡೆ ಇಟ್ಟರೆ ನಿಮ್ಮ ಕೋರಿಕೆ ಈಡೇರುತ್ತದೆ ಎಂಬುವುದು ಇಲ್ಲಿಯ ನಂಬಿಕೆ.

ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಆಪ್ತರು ಕುಡಿಯುವ ಮದ್ಯ ಮತ್ತು ಸೈಡ್ (ಚಕ್ಕಲಿ, ನಿಪ್ಪಟು, ಮಾಂಸಾಹಾರ)ನಲ್ಲಿ ತೆಗೆದುಕೊಳ್ಳುವ ಆಹಾರವನ್ನು ದೇವರಿಗೆ ಎಡೆಯಾಗಿ ತರುತ್ತಾರೆ. ಈ ರೀತಿ ಮಾಡಿದ್ರೆ ಮುಂದಿನ ಬಾರಿ ದೇವಸ್ಥಾನಕ್ಕೆ ಬರೋವಷ್ಟರಲ್ಲಿ ನಿಮ್ಮ ಆಪ್ತರು ಮದ್ಯವ್ಯಸನದಿಂದ ದೂರ ಆಗಿರುತ್ತಾರೆ ಎಂದು ಭಕ್ತರು ಹೇಳುತ್ತಾರೆ.

ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಉಡುಪಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ. ದಟ್ಟ ಕಾನನದ ಕಾಫಿತೋಟದ ಮಧ್ಯೆ ಇರೋ ಈ ಕೊರಗಜ್ಜನ ಮಹಿಮೆ ಅಪಾರ ಅನ್ನೋದು ಅಸಂಖ್ಯಾತ ಭಕ್ತರ ನಂಬಿಕೆ. ಇಲ್ಲಿ ಪ್ರತಿ ಶುಕ್ರುವಾರ ಮದ್ಯಪಾನ ಬಿಡಿಸುವ ಪೂಜೆ ನಡೆಯಲಿದ್ದು, ಇಲ್ಲಿಯವರಗೆ 410ಕ್ಕೂ ಅಧಿಕ ಮಂದಿ ಕುಡಿಯೋದನ್ನ ಬಿಟ್ಟಿದ್ದಾರೆ ಸ್ಥಳೀಯರು ಹೇಳುತ್ತಾರೆ.

Comments

Leave a Reply

Your email address will not be published. Required fields are marked *