ಹೆಣ್ಣು ಮಗುವೆಂದು ಒಲೆಯಲ್ಲಿ ಸೌದೆಯಂತೆ ಉರಿಸಿದ್ಳು

ಚಿಕ್ಕಮಗಳೂರು: ಇತಿಹಾಸದಲ್ಲೂ ಕಂಡುಕೇಳರಿಯದ, ಮನುಕುಲವೇ ತಲೆತಗ್ಗಿಸುವಂತಹ ಘಟನೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸಾಕ್ಷಿಯಾಗಿದೆ.

ತಾಯಿ ಕರುಳಿನ ಜೊತೆ ಪ್ರೀತಿ, ಮಮತೆ, ವಾತ್ಸಲ್ಯ ಎಲ್ಲವನ್ನೂ ಮರೆತ ನಿಕೃಷ್ಟ ತಾಯಿಯೇ ಈ ಕಥೆಯೇ ಕೇಂದ್ರಬಿಂದುವಾಗಿದ್ದಾಳೆ. ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಈ ಘಟನೆ ಜಿಲ್ಲೆಯ ಕಡೂರು ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ.

ಹೆಣ್ಣು ಮಗುವೆಂಬ ಒಂದೇ ಒಂದು ಕಾರಣಕ್ಕೆ ತಾನೇ ಹೊತ್ತು ಹೆತ್ತ 23 ದಿನದ ಹಸುಗೂಸನ್ನ ಸೌದೆಯಂತೆ ಒಲೆಯಲ್ಲಿ ಉರಿಸಿ ಕೊಂದಿದ್ದಾಳೆ. ಮಗುವನ್ನ ಒಲೆಗೆ ಹಾಕುವ ಮುನ್ನ ಅಳುತ್ತೆಂದು ಕುತ್ತಿಗೆಯನ್ನ ಕಚ್ಚಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿರೋ ಕಡೂರು ಪೊಲೀಸರು ಪರಮಪಾಪಿ ತಾಯಿ ಸಂಗೀತಾಳನ್ನ ಬಂಧಿಸಿದ್ದಾರೆ.

ಮಗುವನ್ನ ಕೊಲ್ಲಲು ಪ್ರೇರೇಪಿಸಿದರೆಂಬ ಕಾರಣಕ್ಕೆ ಚಂದ್ರಮ್ಮ, ರಮೇಶ್ ಹಾಗೂ ಬಾಬು ಎಂಬ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಕಡೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ  ನಡೆದಿದೆ.

Comments

Leave a Reply

Your email address will not be published. Required fields are marked *