ಬಯಲುಸೀಮೆಯಲ್ಲಿ ಆಲಿಕಲ್ಲು ಸಹಿತ ಅಕಾಲಿಕ ಮಳೆಗೆ ಭತ್ತದ ಬೆಳೆ ನಾಶ

ಚಿಕ್ಕಬಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹಲವೆಡೆ ಅಲಿಕಲ್ಲು ಮಳೆ ಸುರಿದಿದೆ. ಅಕಾಲಿಕ ಮಳೆಗೆ ಸುಮಾರು 150 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ನಾಶವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ರೈತರಾದ ಕೆ.ಕೆ.ವೆಂಕಟೇಶ್, ರಂಗಪ್ಪ, ಮಧುಸೂದನರೆಡ್ಡಿ, ಕೃಷ್ಣಾರೆಡ್ಡಿ, ಮುರಳಿ, ವೇಣುಗೋಪಾಲ, ಬಾಸ್ಕರ ಹಾಗೂ ಮತ್ತಿತರೆ ಕೃಷಿ ರೈತರ 150 ಎಕರೆಗೂ ಹೆಚ್ಚು ವಿಸ್ತೀರ್ಣದ ಜಮೀನನಲ್ಲಿ ಬೆಳೆದ ಭತ್ತವೆಲ್ಲ ತೆನೆಯಿಂದ ಕಳಚಿಕೊಂಡಿದೆ. ಮತ್ತೊಂದೆಡೆ ಕಟಾವು ಮಾಡಿದ್ದ ಭತ್ತದ ಬೆಳೆ ಮಳೆಪಾಲಾಗಿದೆ.

ತಾಲೂಕಿನ ತೊಳ್ಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಿಪಲ್ಲಿ, ಸುಜ್ಞಾನಂಪಲ್ಲಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಧಾರಕಾರ ಅಲಿಕಲ್ಲು ಮಳೆಯಾಗಿದೆ.

Comments

Leave a Reply

Your email address will not be published. Required fields are marked *