ನಾಗೇಶ್ ಕೈ ಕೊಡ್ತಾನೆ ಅಂತ ನಾನು ಮೊದಲೇ ಹೇಳಿದ್ದೆ: ಕೆ.ಹೆಚ್ ಮುನಿಯಪ್ಪ

ಚಿಕ್ಕಬಳ್ಳಾಪುರ: ಪಕ್ಷೇತರ ಶಾಸಕ ನಾಗೇಶ್ ನಮಗೆ ಕೈ ಕೊಡುತ್ತಾನೆ ಎಂದು ನಾನು ಮೊದಲೇ ಹೇಳಿದ್ದೆ ಎಂದು ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.

ಇಂದು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾತನಾಡಿದ ಕೆ.ಹೆಚ್ ಮುನಿಯಪ್ಪ, ಪಕ್ಷೇತರ ಶಾಸಕರ ಬದಲು ಪಕ್ಷದ ನಿಷ್ಟಾವಂತರಿಗೆ ಮಂತ್ರಿ ಸ್ಥಾನ ನೀಡಿ, ನಾಗೇಶ್ ಯಾವಾಗಲಾದರು ಕೈ ಕೊಡಬಹುದು ಎಂದು ನಾನು ಹೇಳಿದ್ದೆ ಎಂದರು.

ನನ್ನ ಮಾತು ಕೇಳದೆ ಅವರು ಅವರ ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ನೀಡಿದರು. ಇದೀಗ ಅವರೇ ಕೈ ಕೊಟ್ಟು ಹೋಗಿದ್ದಾರೆ ಎಂದು ಪಕ್ಷೇತರ ಶಾಸಕ ನಾಗೇಶ್ ರಾಜೀನಾಮೆ ವಿರುದ್ಧ ಕೆ.ಹೆಚ್ ಮುನಿಯಪ್ಪ ಅಸಮಾಧಾನ ಹೊರಹಾಕಿದರು. ಇದೇ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಿರುವ ಶಾಸಕರು ವಾಪಸ್ ಆಗಮಿಸಿ ಪಕ್ಷಕ್ಕೆ ನಿಷ್ಟೆಯಿಂದಿರುವಂತೆ ಕೆ.ಹಚ್.ಮುನಿಯಪ್ಪ ಅತೃಪ್ತರಿಗೆ ಮನವಿ ಮಾಡಿದರು.

Comments

Leave a Reply

Your email address will not be published. Required fields are marked *