ಪೇಜಾವರಶ್ರೀ ಗುಣಮುಖಕ್ಕೆ ನವಗ್ರಹ ಪೂಜೆ, ಮೃತ್ಯುಂಜಯ ಜಪ

ಚಾಮರಾಜನಗರ: ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥರ ಆರೋಗ್ಯ ಸುಧಾರಣೆಗಾಗಿ ನಗರದ ಕೊಳದ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಚಾಮರಾಜನಗರದಲ್ಲಿ ಪೇಜಾವರ ಶ್ರೀ ಶೀಘ್ರವೇ ಗುಣಮುಖರಾಗಲಿ ಎಂದು ಮೃತ್ಯುಂಜಯ ಜಪ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಪೇಜಾವರಶ್ರೀ ಶೀಘ್ರ ಗುಣಮುಖರಾಗಲು ನವಗ್ರಹ ಪೂಜೆ, ಮೃತ್ಯುಂಜಯ ಜಪಹರಳುಕೋಟೆ ಜನಾರ್ಧನಸ್ವಾಮಿ ದೇಗುಲದ ಅರ್ಚಕ ಅನಂತಪ್ರಸಾದ್ ನೇತೃತ್ವದಲ್ಲಿ ನವಗ್ರಹ ಪೂಜೆ, ಮೃತ್ಯುಂಜಯ ಜಪ ನೆರವೇರಿಸಿ ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಅರ್ಚಕ ಅನಂತಪ್ರಸಾದ್, ಧಾರ್ಮಿಕ ಮುಖಂಡರಾಗಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪೇಜಾವರಶ್ರೀಗಳ ಸೇವೆ ನಾಡಿಗೆ ಅಗತ್ಯವಿದೆ ಎಂದರು.

Comments

Leave a Reply

Your email address will not be published. Required fields are marked *