ರಜೆಗಾಗಿ ಎಸ್‍ಬಿಐ ನೌಕರನಿಂದ ಕೊರೊನಾ ಡ್ರಾಮಾ

ಚಾಮರಾಜನಗರ: ಎಸ್‍ಬಿಐ ನೌಕರನೊಬ್ಬ ರಜೆ ಪಡೆಯಲು ಗಂಟಲು ನೋವು, ಶೀತ, ಕೆಮ್ಮು ಮತ್ತು ಜ್ವರ ಬಂದಿದೆ ಎಂದು ನಾಟಕವಾಡಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ಎಸ್‍ಬಿಐ ಬ್ಯಾಂಕ್ ನೌಕರ ಅನುರಾಗ್ ರಜೆಗಾಗಿ ಕೊರೊನಾ ಬಂದಿದೆ ಎಂದು ಡ್ರಾಮಾ ಮಾಡಿದ್ದಾರೆ. ಬ್ಯಾಂಕಿನಲ್ಲಿ ರಜೆ ನೀಡದ ಕಾರಣ ಕೊರೊನಾ ಲಕ್ಷಣಗಳು ಇವೆಯೆಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನುರಾಗ್ ಡ್ರಾಮಾ ತಿಳಿಯದೆ ವೈದ್ಯರಿಂದ ತಪಾಸಣೆ ಕೂಡ ನಡೆದಿದೆ.

ಪರೀಕ್ಷೆಯಲ್ಲಿ ಯಾವುದೇ ರೋಗ ಲಕ್ಷಣವಿಲ್ಲದ ಅನುರಾಗ್‍ರನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ನಿಗಾ ವಹಿಸಿದ್ದು, ಆತನಿಗೆ ಯಾವುದೇ ಸೋಂಕು ಇಲ್ಲ. ರಜೆ ಪಡೆಯುವ ಸಲುವಾಗಿ ಅನುರಾಗ್ ನಾಟಕವಾಡಿದ್ದಾನೆ ಎಂದು ಗುಂಡ್ಲುಪೇಟೆ ತಾಲೂಕು ವೈಧ್ಯಾದಿಕಾರಿ ಡಾ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *