‘ಎಂಎಲ್‍ಎ’ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ!

ಬೆಂಗಳೂರು: ಬಿಗ್ ಬಾಸ್-4 ವಿಜೇತ ಪ್ರಥಮ್ ಎಂಎಲ್‍ಎ ಸಿನಿಮಾದಲ್ಲಿ ನಟಿಸುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಎಂಎಲ್‍ಎ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ಪ್ರಥಮ್ ಎಂಎಲ್‍ಎ ಸಿನಿಮಾದ ಆಡಿಯೋ ಲಾಂಚ್‍ಗೆ ದರ್ಶನ್ ಅವರನ್ನು ಕರೆಸಿ ಅವರ ಬಗ್ಗೆ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ದರ್ಶನ್ ಸರ್ ಈ ಕಾರಣಕ್ಕೆ ಗ್ರೇಟ್. ಅಂದು ಮೈಸೂರಿನಲ್ಲಿ ಯಜಮಾನ ಸಿನಿಮಾ ಶೂಟಿಂಗ್ ನಡೀಬೇಕಾದ್ರೆ ಕಾಲ್ ಮಾಡಿ ಹೋಗಿದ್ದೆ. ನನ್ನನ್ನು ಕಂಡೊಡನೆ ಬಹಳ ಪ್ರೀತಿಯಿಂದ ಮಾತನಾಡಿದ್ದರು ಎಂದು ಪ್ರಥಮ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ನಾನು ದರ್ಶನ್‍ರನ್ನು ಭೇಟಿ ಮಾಡಿ ಅವರನ್ನು ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಹ್ವಾನ ಮಾಡಿದೆ. ಖಂಡಿತಾ ಬರ್ತೀನಮ್ಮ ಎಂದು ಹೇಳಿದ್ದರು. ಅವರ ಬ್ಯುಸಿ ಶೆಡ್ಯೂಲ್‍ನಲ್ಲಿ ಎಲ್ಲಿ ಮರೆತುಬಿಡುತ್ತಾರೆ ಎಂದುಕೊಂಡೆ, ಆಗ ಅವರ ಆಪ್ತರ ಮೂಲಕ ಬೆಂಬಿಡದೆ ಬಾಸ್ ಬೆನ್ನು ಹತ್ತಿದೆ. ಮೊನ್ನೆ ನಾನೇ ಅವರಿಗೆ ಕರೆ ಮಾಡಿ ಮನವಿ ಮಾಡಿಕೊಂಡೆ, ಆಗ ಒಪ್ಪಿಕೊಂಡರು ಎಂದು ಪ್ರಥಮ್ ತಿಳಿಸಿದ್ದಾರೆ.

ದರ್ಶನ್ ಸರ್ ಯಾವತ್ತೂ ಕೊಟ್ಟ ಮಾತು ಬದಲಿಸಿಲ್ಲ. ಇದ್ದಕ್ಕೆ ಈ ಮನುಷ್ಯನ್ನ ಕಂಡರೆ ಜನ ಪ್ರೀತಿಯಿಂದ ಹಿಂದೆ ಬೀಳುತ್ತಾರೆ. ಇವರಿಂದ ನಾನು ಕಲಿತ ಪಾಠ ಏನೆಂದರೆ ಕೊಟ್ಟ ಮಾತು ಈ ಇಂಡಸ್ಟ್ರಿಯಲ್ಲಿ ತಪ್ಪಬಾರದು ಎಂದು ಪ್ರಥಮ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

 

Comments

Leave a Reply

Your email address will not be published. Required fields are marked *