ಮಾಂಗಲ್ಯ ಸರ ಕದಿಯಲು ಯತ್ನಿಸಿದ ಸರಗಳ್ಳರಿಗೆ ಹಿಗ್ಗಾಮುಗ್ಗಾ ಥಳಿತ

POLICE

ಬೆಂಗಳೂರು: ಮಹಿಳೆಯ ಮಾಂಗಲ್ಯ ಸರ ಕದಿಯಲು ಯತ್ನಿಸಿದ ಖದೀಮರಿಗೆ ಸಾರ್ವಜನಿಕರೆ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಆನಂದನಗರ ಗ್ರಾಮದ ಬಳಿ ನಡೆದಿದೆ.

ನಿಖಿಲ್, ಬಸವರಾಜು, ತೌಸಿಪ್ ಮಹಿಳೆಯ ಮಾಂಗಲ್ಯ ಸರ ಕದಿಯಲು ಯತ್ನಿಸಿದ ಜನರ ಕೈಗೆ ಸಿಕ್ಕಿ ಬದಿದ್ದು, ಸಾರ್ವಜನಿಕರು ಮೈತುಂಬ ಬಾಸುಂಡೆ, ರಕ್ತ ಬರುವಂತೆ ಥಳಿಸಿದ್ದಾರೆ. ಈ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯಲ್ಲಿ ಸರಗಳ್ಳತನಕ್ಕೆ ಬಂದ 5 ಆರೋಪಿಗಳಲ್ಲಿ ಇಬ್ಬರು ಎಸ್ಕೇಪ್ ಆಗಿದ್ದಾರೆ. ಸಾರ್ವಜನಿಕರು ಸಿಕ್ಕಿ ಬಿದ್ದ ಮೂವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಕಾರಣ ಆರೋಪಿಗಳನ್ನು ಪೊಲೀಸರು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಕರೆತುಂದು ಚಿಕಿತ್ಸೆ ಕೋಡಿಸಿದ್ದಾರೆ. ಆಯುಧ ಪೂಜೆ ದಿನವೇ ಆಟೋದಲ್ಲಿ ಬಂದ ಸರಗಳ್ಳರ ಮಹಿಳೆಯ ಮಾಂಗಲ್ಯ ಆಭರಣ ಕದಿಯಲು ಯತ್ನಿಸಿದ್ದರು. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ವಿಚಾರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *