ಉಡುಪಿ ಶಿರೂರು ಮಠದ ಸಿಸಿಟಿವಿ ಡಿವಿಆರ್ ನಾಪತ್ತೆ!

ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಬಳಿಕ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಮಠದ ಡಿವಿಆರ್ ನಾಪತ್ತೆಯಾಗಿದೆ.

ಸ್ವಾಮೀಜಿಗಳ ಅಸಹಜ ಸಾವಿನ ಕುರಿತಂತೆ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಈ ವೇಳೆ ಸಿಸಿಟಿವಿ ವಿಡಿಯೋಗಳನ್ನು ಸೇವ್ ಮಾಡುತ್ತಿದ್ದ ಡಿವಿಆರ್ ಇದೀಗ ಮೂಲ ಮಠದಿಂದ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಶಿರೂರು ಮೂಲಮಠದಿಂದ ಕೆಲ ವಸ್ತುಗಳು ಕೂಡ ಕಾಣೆಯಾಗಿವೆ.

ಶಿರೂರು ಮೂಲ ಮಠದ ಪ್ರವೇಶ ದ್ವಾರದಲ್ಲೇ ಒಂದು ಸಿಸಿಟಿವಿ ಇತ್ತು. ಇದರಲ್ಲಿ ಮಠಕ್ಕೆ ಬರುವ ಎಲ್ಲಾ ಭಕ್ತರ ಬಗ್ಗೆ ದಾಖಲಾಗುತ್ತಿತ್ತು. ಯಾಕಂದ್ರೆ ಇದೊಂದು ದಾರಿಯ ಮೂಲಕವೇ ಭಕ್ತರು ಮಠ ಪ್ರವೇಶವಾಗಬೇಕಿತ್ತು. ಹೀಗಾಗಿ ಪೊಲೀಸರು ಇದೊಂದೇ ಸಾಕ್ಷಿ ಅಂತ ಪೊಲೀಸರು ನಂಬಿದ್ದರು. ತನಿಖೆಯ ಆರಂಭದಲ್ಲಿಯೇ ಪೊಲೀಸರು ಡಿವಿಆರ್ ಸಿಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿದ್ದರು. ಅಲ್ಲದೇ ಡಿವಿಆರ್ ಅನ್ನು ಸ್ವತಃ ಸ್ವಾಮೀಜಿಯವರೇ ಬೇರೆ ಮಠಕ್ಕೆ ಶಿಫ್ಟ್ ಮಾಡಿದ್ದಾರೆಯೋ ಎನ್ನುವುದರ ಬಗ್ಗೆ ತನಿಖೆ ನಡೆದಿತ್ತು. ಆದ್ರೆ ಎಲ್ಲಿ ಹುಡುಕಾಡಿದ್ರೂ ಡಿವಿಆರ್ ಮಾತ್ರ ಕಾಣಿಸುತ್ತಿಲ್ಲ.

ಸ್ವಾಮೀಜಿಯವರು ಆಸ್ಪತ್ರೆಗೆ ದಾಖಲಾದ ದಿನವೇ ಯಾರೋ ಮಠಕ್ಕೆ ಬಂದು ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಆದ್ರೆ ಏನೆಲ್ಲ ವಸ್ತುಗಳನ್ನು ಹಾಗೂ ಯಾರು ತೆಗೆದುಕೊಂಡು ಹೋಗಿದ್ದಾರೆಂಬ ಬಗ್ಗೆ ದಾಖಲೆಗಳು ಈ ಸಿಸಿಟಿವಿಯಲ್ಲಿ ಸಿಗಬೇಕಿತ್ತು. ಆದ್ರೆ ಡಿವಿಆರ್ ಅನ್ನೇ ತೆಗೆದುಕೊಂಡು ಹೋಗಿದ್ರೆ ಎಲ್ಲಾ ದಾಖಲೆಗಳು ನಾಪತ್ತೆ ಆಗಿರೋ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಆ ದಿನ ಮಠಕ್ಕೆ ಬಂದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮೂರು ತಿಂಗಳ ಹಿಂದೆ ಮಠದಲ್ಲಿ ಹಸುವಿನ ಕಳ್ಳತನವಾಗಿತ್ತು. ಆ ಸಂದರ್ಭದಲ್ಲಿ ಸಿಸಿಟಿವಿಯಲ್ಲಿ ದೃಶ್ಯಗಳು ಲಭ್ಯವಾಗಿದ್ದು, ಅದನ್ನು ಸ್ವತಃ ಸ್ವಾಮೀಜಿಗಳೇ ಮಧ್ಯಮಗಳಿಗೆ ನೀಡಿದ್ದರು. ಹೀಗಾಗಿ ಅಂದಿ ಇದ್ದ ಡಿವಿಆರ್ ಆ ನಂತ್ರ ಏನಾಗಿದೆ ಎಂಬುದೇ ಇದೀಗ ಪ್ರಶ್ನೆಯಾಗಿದೆ.

Comments

Leave a Reply

Your email address will not be published. Required fields are marked *