ನನ್ನ ಕಂಡ್ರೆ ಲವ್ ಜಾಸ್ತಿ, ಅದಕ್ಕೆ ಕಣ್ಣು ಹಾಕ್ತಾರೆ: ಡಿಕೆ ಶಿವಕುಮಾರ್

ಬೆಂಗಳೂರು: ನನ್ನನ್ನ ರೇವಣ್ಣಗೆ ಹೋಲಿಸಬೇಡಿ. ಇಬ್ಬರ ನಡುವೆ ಪವರ್ ಗಲಾಟೆ ಅನ್ನೋದು ತಪ್ಪು. ಅವರು ದೊಡ್ಡ ಕುಟುಂಬದ ಮಕ್ಕಳು ನಾನು ಸಾಮಾನ್ಯ ವ್ಯಕ್ತಿ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಹಣ್ಣು ಪಕ್ವವಾಗಿ ಮರದಲ್ಲಿದ್ದರೆ ಎಲ್ಲಾ ಕಲ್ಲು ಹೊಡಿತಾರೆ. ನೀವು ನೋಡೋಕೆ ಚೆನ್ನಾಗಿದ್ದರೆ ಎಲ್ಲಾ ನೋಡುತ್ತಾರೆ. ಮೋರ್ ಸ್ಟ್ರಾಂಗ್ ಮೋರ್ ಎನಿಮಿಸ್ ಲೆಸ್ ಸ್ಟ್ರಾಂಗ್ ಲೆಸ್ ಎನಿಮಿಸ್. ನನಗು ಹಾಗೆ ಆಗಿದೆ. ನನ್ನ ಕಂಡರೆ ಪ್ರೀತಿ ಜಾಸ್ತಿ ಅದಕ್ಕೆ ನನ್ನ ಮೇಲೆ ಕಣ್ಣು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಕಂಡರೆ ಅಸೂಯೆ ಅದಕ್ಕೆ ಸಿಬಿಐ ಮೂಲಕ ನಿಯಂತ್ರಣ ಮಾಡಲು ಯತ್ನಿಸುತ್ತಿದ್ದಾರೆ. ಸಿಬಿಐ ಅಧಿಕಾರಿಗಳು ಇಲ್ಲಿನ ಅಧಿಕಾರಿಗಳಿಗೆ ಹಿಂಸೆ ಮಾಡುತ್ತಿದ್ದಾರೆ. ಹಣ ವರ್ಗಾವಣೆಯಲ್ಲಿ ಸುರೇಶ್ ಪಾತ್ರ ಇದೆ ಅಂತ ಒಪ್ಪಿಸೋಕೆ ಯತ್ನಿಸಿದ್ದಾರೆ. ನಾನು ಹಳ್ಳಿಯಿಂದ ಬಂದವನು ನಾನೆ ಯಾಕೆ ಟಾರ್ಗೆಟ್ ಗೊತ್ತಿಲ್ಲ. ಅದ್ಯಾಕೆ ನನ್ನ ರಾಶಿಗೆ ಎಂಟ್ರಿ ಆಗಿದಾರೋ ಗೊತ್ತಿಲ್ಲ. ನಾನು ಚೆಸ್ ಪ್ಲೇಯರ್ ಟೈಮ್ ನೋಡಿ ಚಕ್ ಕೊಡುತ್ತೀನಿ ಎಂದು ತಿಳಿಸಿದರು.

ನಾನು ಯಾರಿಗೂ ಅರ್ಜಿ ಹಾಕೊಂಡು ಹೋಗಿಲ್ಲ. ನಾನು ಕಾಂಗ್ರೆಸ್ ಪಾರ್ಟಿಯವನು. ರೇವಣ್ಣ ಅವರಿಗೂ ನನಗೂ ಹೋಲಿಕೆ ಮಾಡಬೇಡಿ. ನನಗೆ ರೇವಣ್ಣ ಸಹವಾಸ ಬೇಡವೇ ಬೇಡ. ರೇವಣ್ಣ ಬೇಕಾದರೆ ಎಲ್ಲಾ ಖಾತೆ ಇಟ್ಟುಕೊಳ್ಳಲಿ ಮುಖ್ಯಮಂತ್ರಿ ಆಗಲಿ ನನಗೇನು? ಅವರ ಪಾರ್ಟಿ ಬೇರೆ. ನಮ್ಮ ಪಾರ್ಟಿ ಬೇರೆ. ಇಬ್ಬರು ಒಟ್ಟಿಗೆ ಸೇರಿ ಸರ್ಕಾರ ರಚನೆ ಮಾಡಿದ್ದೇವೆ. ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ನಾನು ಬೇಕಾದರೆ ಉಳಿಸಿ ಕೊಳ್ಳುತ್ತಾರೆ. ಎಲ್ಲದಕ್ಕೂ ಸಮಯ ಬರಬೇಕು ಕಾಲ ಕೂಡಿ ಬರಬೇಕು ಎಂದು ಶಿವಕುಮಾರ್ ಹೇಳಿದರು.

Comments

Leave a Reply

Your email address will not be published. Required fields are marked *