ರಾತ್ರೋರಾತ್ರಿ ಕಾರು ಓಡಾಟ- ವೇಗದ ರಭಸಕ್ಕೆ ರಸ್ತೆಯಲ್ಲೇ ಬಿತ್ತು ಬಿಡಿಭಾಗ!

ಬೆಂಗಳೂರು: ಸಿಲಿಕಾನ್ ಸಿಟಿಯ ಬಸವೇಶ್ವರ ನಗರದ ಶಂಕರ ಮಠದಲ್ಲಿ ಡ್ರಾಗ್ ರೇಸ್ ನಡೆಯುತ್ತಿದ್ದೇಯಾ ಎಂಬ ಪ್ರಶ್ನೆ ಹುಟ್ಟಿದೆ. ಏಕೆಂದರೆ ಆ ಏರಿಯಾದ ಜನ ಆಗ ತಾನೇ ನಿದ್ರೆಗೆ ಜಾರಿದ್ದಾಗ ಪುಂಡನೊಬ್ಬ ಇಡೀ ಏರಿಯಾದವರನ್ನೇ ಬೆಚ್ಚಿ ಬೀಳಿಸಿದ್ದಾನೆ.

ಬಸವೇಶ್ವರ ನಗರದ ಶಂಕರ ಮಠ ರಸ್ತೆ ರೆಸಿಡೆನ್ಸಿಷಿಯಲ್ ಏರಿಯಾದ ಜನರು ಭಾನುವಾರ ಆದ್ದರಿಂದ ರಾತ್ರಿ 11ರ ವೇಳೆಗೆಲ್ಲ ನಿದ್ರೆಯ ಮೂಡಿಗೆ ಜಾರಿದ್ದಾರೆ. ಆದರೆ 11.23ರ ವೇಳೆಗೆ ಪ್ರಶಾಂತ್ ನಗರದ ಕಡೆಯಿಂದ ಶಂಕರಮಠದತ್ತ ಬಂದಿರುವ ಆರೋಪಿ ಶಂಕರ ಮಠದ ಗಲ್ಲಿ ರಸ್ತೆಗಳಲ್ಲಿ 120ರ ವೇಗದಲ್ಲಿ ಗಾಡಿ ಚಾಲನೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಪುಂಡ ಕಾರು ಚಾಲನೆ ಮಾಡಿರುವ ವೇಗಕ್ಕೆ ಕಾರಿನ ಕೆಲ ಬಿಡಿ ಭಾಗಗಳು ರಸ್ತೆಯಲ್ಲಿ ಬಿದ್ದಿವೆ. ಆದರೂ ಕಾರು ನಿಲ್ಲಿಸದ ಆರೋಪಿ, ಜೋರಾಗಿ ಶಬ್ಧ ಮಾಡ್ತಾ ವೇಗವಾಗಿ ಕಾರು ಚಲಾಯಿಸಿದ್ದಾನೆ. ಆರೋಪಿಯ ಪುಂಡಾಟಕ್ಕೆ ಏರಿಯಾದ ಜನ ಭಯಭೀತರಾಗಿದ್ದು ಹೊರಗೆ ಏನಾಯ್ತೋ ಎಂದು ಓಡಿಬಂದಿದ್ದಾರೆ.

ಈ ಪ್ರದೇಶದಲ್ಲಿ ಆಗಾಗ್ಗೆ ಕಳ್ಳತನ ಪ್ರಕರಣಗಳು ನಡೆಯುತ್ತಿರುತ್ತದೆ. ಶಂಕರಮಠ ಸುತ್ತಮುತ್ತಾ ಹಲವು ಗ್ಯಾರೇಜ್ ಗಳಿದ್ದು, ಟೆಸ್ಟ್ ಡ್ರೈವ್‍ಗಾಗಿ ಗ್ಯಾರೇಜ್ ನ ಹುಡುಗರೇ ಈ ರೀತಿ ಪುಂಡಾಟ ನಡೆಸಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಘಟನೆ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *