ಕಾರ್ ಡಿಕ್ಕಿ ರಭಸಕ್ಕೆ ಬೈಕ್ ಪೀಸ್ ಪೀಸ್ – ಮಾರುದ್ದ ದೂರ ಹಾರಿಬಿದ್ದ ಬೈಕ್ ಸವಾರ ಬಚಾವ್

ಬೆಂಗಳೂರು: ರಸ್ತೆ ದಾಟುತ್ತಿದ್ದ ಬೈಕ್‍ಗೆ ಫಾರ್ಚ್ಯುನರ್ ಕಾರ್ ಡಿಕ್ಕಿ ಹೊಡೆದ ಭೀಕರ ಅಪಘಾತದ ಮೈಜುಂ ಅನ್ನಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ ಈ ಘಟನೆ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 4ರ ಬೆಂಗಳೂರು-ತುಮಕೂರು ರಸ್ತೆ ಇದಾಗಿದೆ. ಉತ್ತರಪ್ರದೇಶ ಮೂಲದ ಬೈಕ್ ಸವಾರ ರಸ್ತೆ ದಾಟುತ್ತಿದ್ದು, ಅದೇ ವೇಳೆ ಅತೀ ವೇಗದಿಂದ ಬಂದ ಫಾರ್ಚ್ಯುನರ್ ಕಾರ್ ಡಿಕ್ಕಿ ಹೊಡೆದಾಗ, ಮೇಲೆ ಹಾರಿ ಮಾರುದ್ದ ದೂರ ಬೈಕ್ ಸವಾರ ಬಿದ್ದಿದ್ದಾನೆ. ಗಂಭೀರ ಅಪಘಾತವಾದರೂ ಸಹ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಡಾಬಸ್‍ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾದ ಬೈಕ್ ಸವಾರ ಉತ್ತರ ಪ್ರದೇಶಕ್ಕೆ ತೆರಳಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜೀವ ಗಟ್ಟಿ ಇದ್ದರೆ ಯಮನಿಗೂ ಸೆಡ್ಡು ಹೊಡೆಯಬಹುದು ಎಂಬುದಕ್ಕೆ ಈ ಬೈಕ್ ಸವಾರ ಸಾಕ್ಷಿಯಾಗಿದ್ದಾನೆ. ಅಪಘಾತದ ನಂತರ ಮಾನವೀಯತೆ ಮರೆತ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *