ಚಾಲಕ ಸೇರಿ ಮೂವರು ಮಕ್ಕಳು ಜಲಾಶಯದಲ್ಲಿ ಮುಳುಗಿ ದುರ್ಮರಣ

ಚಿಕ್ಕಬಳ್ಳಾಪುರ: ಜಲಾಶಯದಲ್ಲಿ ಮೂವರು ಮಕ್ಕಳು ಸೇರಿ ಕಾರು ಚಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.

ಉರಿಯಾ (12), ಸಾಧ್ (7), ಸಭಾ (13) ಮತ್ತು ಚಾಲಕ ಆರೀಫ್(23) ಮೃತ ದುರ್ದೈವಿಗಳು. ಇವರು ಬೆಂಗಳೂರಿನ ಬುಕ್ಕಸಂದ್ರ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರು ಕಾರಿನಲ್ಲಿ ನಂದಿಬೆಟ್ಟ ಪ್ರವಾಸ ಮುಗಿಸಿ ಶ್ರೀನಿವಾಸ ಸಾಗರಕ್ಕೆ ಬಂದಿದ್ದರು.

ಮಕ್ಕಳು ಆಟವಾಡಲು ಜಲಾಶಯಕ್ಕೆ ಇಳಿದಿದ್ದರು. ಆಟವಾಡುತ್ತಿದ್ದಾಗಲೇ ಮಕ್ಕಳು ಮುಳುಗಿದ್ದಾರೆ. ಇದನ್ನು ಕಂಡ ಚಾಲಕ ಆರೀಫ್ ರಕ್ಷಣೆಗೆಂದು ಅವರು ಜಲಾಶಕ್ಕೆ ಇಳಿದಿದ್ದಾರೆ. ದುರದೃಷ್ಟವಶಾತ್ ಆರೀಫ್ ಸೇರಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಳಿಕ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಕಾರ್ಯಚರಣೆ ನಡೆಸುತ್ತಿದ್ದು, ಇಬ್ಬರ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಮತ್ತಿಬ್ಬರು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *