ಸಿನಿಮೀಯ ರೀತಿ 20 ಅಡಿ ಎತ್ತರದ ಸೇತುವೆಯಿಂದ ಬಿದ್ದ ಕಾರು – ಮೂವರು ಪಾರು

ಶಿವಮೊಗ್ಗ: ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಕಾರು 20 ಅಡಿ ಆಳಕ್ಕೆ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಜಯನಗರ ಸಮೀಪದ ಶರಾವತಿ ಸೇತುವೆ ಮೇಲೆ ನಡೆದಿದೆ.

ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಬೈಕ್ ಸವಾರ ಹೊಸನಗರದ ನಿವಾಸಿ ತಜ್ಮುಲ್ ಅವರ ಕಾಲು ಮುರಿದೆ. ಇತ್ತ ಕಾರಿನಲ್ಲಿದ್ದ ಶ್ರೀನಾಥ್, ಶ್ರೀಧರ್, ನಾಗೇಂದ್ರ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಘಟನೆಯಲ್ಲಿ ಗಾಯಗೊಂಡವರು ಹೊಸನಗರ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಸೇತುವೆ ಸಮೀಪ ಇರುವ ತಿರುವಿನಲ್ಲಿ ಎದುರು ಬಂದ್ ಬೈಕಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹೊಸನಗರ ಪೊಲೀಸರು ಸ್ಥಳ ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *