ಕೆರೆಗೆ ಉರುಳಿದ ಸ್ವಿಫ್ಟ್ ಡಿಸೈರ್ ಕಾರ್- ಇಬ್ಬರು ಮಹಿಳೆಯರು ಸೇರಿ ಐವರು ಜಲಸಮಾಧಿ

ಹಾಸನ: ಸ್ವಿಫ್ಟ್ ಡಿಸೈರ್ ಕಾರೊಂದು ಕೆರೆಗೆ ಉರುಳಿದ ಪರಿಣಾಮ ಐವರು ಜಲಸಮಾಧಿಯಾಗಿರೋ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ತಾಲೂಕಿನ ಹನುಮನಹಳ್ಳಿ ಬಳಿ ಈ ಘಟನೆ ನಡೆದಿದೆ. ಹಂಗ್ರಳ್ಳಿ ಗ್ರಾಮದಿಂದ ಗೊರೂರು ಮಾರ್ಗದಲ್ಲಿರುವ ಹನುಮನಹಳ್ಳಿ ಕೆರೆಯಲ್ಲಿ ಇಂದು ಬೆಳಿಗ್ಗೆ ವ್ಯಕ್ತಿಯ ಶವ ಕಾಣಿಸಿತ್ತು. ಸಾರ್ವಜನಿಕರು ಈ ಬಗ್ಗೆ ಗಮನ ಹರಿಸಿದಾಗ ಕಾರ್ ಕೆರೆಗೆ ಉರುಳಿರುವುದು ಬೆಳಕಿಗೆ ಬಂದಿತ್ತು. ಒರ್ವ ವ್ಯಕ್ತಿಯ ಶವ ತೇಲಿದ್ದು ಕಾರು ಒಳಭಾಗದಲ್ಲಿ ಬೇರೆ ಯಾರಾದ್ರೂ ಇದ್ದರಾ ಎಂದು ಪರಿಶೀಲಿಸಲಾಗಿತ್ತು. ಆಗ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿರುವುದು ಗೊತ್ತಾಗಿದೆ.

ಸದ್ಯಕ್ಕೆ ಇಬ್ಬರ ಗುರುತು ಪತ್ತೆಯಾಗಿದೆ. ಹೊಳೆನರಸೀಪುರ ತಟ್ಟೆಕೆರೆಯ ಅನಿಲ್(22) ಹಾಗೂ ಶಿವಮೊಗ್ಗ ಮೂಲದ ಉಮೇಶ್ ಮೃತರಲ್ಲಿ ಇಬ್ಬರಾಗಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ ಮೇಲೆತ್ತಲು ಹರಸಾಹಸ ಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *