ಸೋತಿದ್ರೂ ವಿಶ್ವನಾಥ್ ಮಂತ್ರಿ ಆಗಬೇಕು: ರಮೇಶ್ ಜಾರಕಿಹೊಳಿ

ಮೈಸೂರು : ಸೋತಿದ್ದರು ಎಚ್. ವಿಶ್ವನಾಥ್ ಮಂತ್ರಿ ಆಗಬೇಕು. ಈ ವಿಚಾರದಲ್ಲಿ ಬೇರೆ ಮಾತೇ ಇಲ್ಲ. ನಾವೆಲ್ಲಾ ವಿಶ್ವನಾಥ್ ಪರ ಇದ್ದೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಮೈಸೂರಿನಲ್ಲಿ ಸ್ಪಷಪಡಿಸಿದ್ದಾರೆ.

ವಿಶ್ವನಾಥ್ ಅವರನ್ನು ಮಂತ್ರಿ ಮಾಡುವಂತೆ ಸಿಎಂಗೆ ಒತ್ತಾಯಿಸುತ್ತೇವೆ. ವಿಶ್ವನಾಥ್ ರಾಜೀನಾಮೆ ಕೊಟ್ಟ ಮೇಲೆಯೇ ಶಾಸಕರ ರಾಜೀನಾಮೆಗೆ ಶಕ್ತಿ ಬಂತು. ಸುಧಾಕರ್ ಈ ವಿಚಾರದಲ್ಲಿ ಏನೂ ಮಾತಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ಕೊಡುವುದಕ್ಕೆ ಆಗಲ್ಲ ಅನ್ನೋ ಅರ್ಥದಲ್ಲಿ ಎಸ್.ಟಿ. ಸೋಮಶೇಖರ್ ಮಾತಾಡಿಲ್ಲ. ನಾವು ವಿಶ್ವನಾಥ್ ಅವರನ್ನು ಕೈ ಬಿಡುವ ಪ್ರಶ್ನೆ ಇಲ್ಲ ಎಂದರು.

ವಿಶ್ವನಾಥ್ ಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಡಿ ಅಂತಾ ಸಿಎಂ ಹೇಳಿದ್ದು ನಿಜ. ಅವರು ಆ ದಿನ ಸಿಎಂ ಮಾತು ಕೇಳಲಿಲ್ಲ. ನಾನು ಕೂಡ ಸ್ಪರ್ಧೆ ಬೇಡ ಅಂದಿದ್ದೆ. ಅಂದು ಗೆಲ್ಲುವ ವಿಶ್ವಾಸದಲ್ಲಿ ಸ್ಪರ್ಧೆ ಮಾಡಿದರು. ಸೋತಿದ್ದಾರೆ ಎಂದು ಅವರನ್ನು ದೂರ ಸರಿಸಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *