ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ : ಸಿ.ಟಿ.ರವಿ

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಿಎಂ ಯಡಿಯೂರಪ್ಪರ ಪರಮಾಧಿಕಾರ ಅಂತ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ವಿಸ್ತರಣೆ ಮಾಡಲಿ ಅಥವಾ ಪುನರ್ ರಚನೆ ಮಾಡಲಿ. ಅದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಸಿಎಂ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಸಂಪುಟ ವಿಸ್ತರಣೆ ಆದ ಮೇಲೆ ಯಾವ ಖಾತೆ ಉಳಿಸಿಕೊಳ್ತೀರಿ ಪ್ರಶ್ನೆಗೆ ಉತ್ತರಿಸಿದ ರವಿ, ಯಾರಿಗೆ ಯಾವ ಖಾತೆ ಕೊಡಬೇಕು ಅಂತ ನಿರ್ಧಾರ ಮಾಡೋರು ಸಿಎಂ ಯಡಿಯೂರಪ್ಪ. ನಾನು ಖಾತೆಗಾಗಿ ಕ್ಯಾತೆ ತೆಗೆಯೊಲ್ಲ ಅಂತ ಸ್ಪಷ್ಟ ಪಡಿಸಿದರು.

ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ್ರು. ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಬಂಡಾಯ ಉಂಟಾಗುತ್ತೆ ಅಂದಿದ್ದ ಸಿದ್ದರಾಮಯ್ಯಗೆ ತಿರುಗೇಟು ಕೊಟ್ರು. ಬಂಡಾಯ ಉಂಟು ಮಾಡುವ ಸಂಚಿನ ಪಾತ್ರದಾರರು ಸಿದ್ದರಾಮಯ್ಯ ಅನ್ನಿಸುತ್ತೆ. ಆದ್ರೆ ಬಿಜೆಪಿಯಲ್ಲಿ ಬಂಡಾಯ ಆಗುತ್ತೆ ಅನ್ನೋದು ಅವರ ಹಗಲಗನಸು ಅಂತ ಲೇವಡಿ ಮಾಡಿದರು.

ಒಂದು ಗಾದೆ ಮಾತಿದೆ. ಮೊದಲು ನಿಮ್ಮ ಎಡೆ ನೋಡಿಕೊಳ್ಳಿ ಅಂತ. ಮೊದಲು ನಿಮ್ಮ ಪಕ್ಷದ ಬಂಡಾಯ ಸರಿ ಮಾಡಿಕೊಳ್ಳಿ. ಮುನಿಯಪ್ಪ, ಖರ್ಗೆ ಸೇರಿ ಹೀಗೆ ಅನೇಕ ಜನ ಬಂಡಾಯ ಎದ್ದಿದ್ದಾರೆ. ಮೊದಲು ಅವರನ್ನ ಸಮಾಧಾನ ಮಾಡಿ ಬಂಡಾಯ ಶಮನ ಮಾಡಿಕೊಳ್ಳಲಿ. ಅದು ಬಿಟ್ಟು ಬಿಜೆಪಿ ಬಂಡಾಯದ ಬಗ್ಗೆ ನಿರೀಕ್ಷೆ ಇದ್ದರೆ ನಿಮ್ಮ ನಿರೀಕ್ಷೆ ಹುಸಿಯಾಗುತ್ತೆ ಅಂತ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

Comments

Leave a Reply

Your email address will not be published. Required fields are marked *