ಸಂಪುಟಕ್ಕೆ ಪಕ್ಷೇತರರು ಸೇರ್ಪಡೆ- ಕುತೂಹಲ ಮೂಡಿಸಿದ ರೆಬೆಲ್ ಶಾಸಕರ ನಡೆ

ಬೆಂಗಳೂರು: ವರ್ಷವಿಡಿ ಬಂಡಾಯದ ಬಾವುಟ ಹಾರಿಸಿಕೊಂಡು ಓಡಾಡಿದವರು ಎಲ್ಲಿ ಇದ್ದಾರೆ. ಸಚಿವ ಸ್ಥಾನ ಕೊಟ್ಟರೆ ಸರಿ ಇಲ್ಲಾ ಅಂದರೆ ನೋಡಿ ಎಂದು ದೋಸ್ತಿಗಳನ್ನು ಹೆದರಿಸಿಕೊಂಡು ಓಡಾಡಿದವರ ಮುಂದಿನ ನಡೆ ಏನು ಎಂದು ಇದೀಗ ಸದ್ಯದ ಕುತೂಹಲವಾಗಿದೆ.

ಹೌದು. ಪಕ್ಷೇತರರನ್ನ ಸಂಪುಟಕ್ಕೆ ಸೇರ್ಪಡೆ ಮಡಿಕೊಂಡ ಬೆನ್ನಲ್ಲೇ ಶಾಸಕರು ಬಂಡಾಯದ ಬಾವುಟ ಹಾರಿಸುತ್ತಾರಾ ಇಲ್ಲಾ ಸೈಲೆಂಟಾಗ್ತಾರಾ ಅನ್ನೋದೆ ಎಲ್ಲರ ಕುತೂಹಲವಾಗಿದೆ. ಹಾಗಾದರೆ ಯಾವ್ಯಾವ ಶಾಸಕರ ನಡೆ ಏನು ಎಂಬುದರ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.


ರಮೇಶ್ ಜಾರಕಿಹೊಳಿ:
ಬಂಡಾಯದ ಬಾವುಟ ಇನ್ನೂ ಕೆಳಗಿಳಿಸಿಲ್ಲ, ಕೋಪ ಕಡಿಮೆಯಾಗಿಲ್ಲ. ಹೀಗಾಗಿ ಬಂಡಾಯ ಹೆಚ್ಚಿಸಿ ಸರ್ಕಾರ ಕೆಡವಲು ಶಾಸಕರ ಸಂಖ್ಯಾ ಬಲವೂ ಇಲ್ಲ. ಆದ್ದರಿಂದ ಸಿಟ್ಟಿದ್ದರೂ ಮೌನವಾಗಬೇಕಾದ ಅನಿವಾರ್ಯತೆ ರಮೇಶ್ ಜಾರಕಿ ಹೊಳಿಯವರಿಗೆ ಎದುರಾಗಿದೆ.

ರಾಮಲಿಂಗಾರೆಡ್ಡಿ:
ಸಚಿವ ಸ್ಥಾನ ಬೇಕು ಅಂತಿದ್ದರೂ ಸರ್ಕಾರ ಕೆಡವೋ ಕೋಪ ಇಲ್ಲ. ತಮ್ಮ ಹಿರಿತನಕ್ಕೆ ಬೆಲೆ ಕೊಡಬೇಕು ಅನ್ನೋದಷ್ಟೇ ಇವರ ಹಠವಾಗಿದೆ. ಬೆಂಗಳೂರು ಮೇಲಿನ ಹಿಡಿತ ಬಳಸಿ ಏನಾದರೂ ಮಾಡಬಹುದು ಅನ್ನೋದು ದೋಸ್ತಿಗಳ ಆತಂಕವಾಗಿದೆ.

ರೋಷನ್ ಬೇಗ್ :
ಸಚಿವ ಸ್ಥಾನ ತಪ್ಪಿಸಿದ ನಾಯಕರ ಮೇಲಿನ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ. ಐಎಂಎ ಹಗರಣದ ಇಕ್ಕಳದಲ್ಲಿ ಸಿಲುಕಿ ರೋಷಾವೇಶ ಕುಗ್ಗಿದೆ. ಹಾಗಾಗಿ ಈಗಿನ ಪರಿಸ್ಥಿತಿಯಲ್ಲಿ ತಟಸ್ಥವಾಗಿರುವ ರೋಷನ್ ಬೇಗ್ ಪ್ಲಾನ್ ಮಾಡಿದ್ದಾರೆ.

ಡಾ.ಸುಧಾಕರ್:
ಸಚಿವ ಸ್ಥಾನ ಬೇಕೆ ಬೇಕು ಎನ್ನುವ ಪ್ರಬಲ ಆಕಾಂಕ್ಷಿಯಾಗಿದ್ದರು. 6 ತಿಂಗಳ ನಂತರ ಸಂಪುಟ ಪುನಾರಚನೆ ಆದಾಗ ನೋಡಿಕೊಂಡರಾಯ್ತು. ಸುಮ್ಮನೆ ಮಾತನಾಡಿ ಬಂಡಾಯಗಾರ ಅನ್ನಿಸಿಕೊಳ್ಳಬಾರದು ಎಂದು ಡಾ. ಸುಧಾಕರ್ ಅವರು ಸುಮ್ಮನಾಗಬಹುದು.

ಬಿ.ಸಿ.ಪಾಟೀಲ್:
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾದರೂ ಬಂಡಾಯಕ್ಕೆ ಜೊತೆಗಾರರಿಲ್ಲ. ಸಂಖ್ಯಾಬಲ ಇಲ್ಲದ ಮೇಲೆ ಬಂಡಾಯ ನಡೆಸಿದರೆ ಪ್ರಯೋಜನ ಇಲ್ಲ. ನಾಯಕರ ಕೆಂಗಣ್ಣಿಗೆ ಗುರಿಯಾಗೋದಕ್ಕಿಂತ ಕಾದು ನೋಡುವ ತಂತ್ರ ಬಿ.ಸಿ ಪಾಟೀಲ್ ಅವರದ್ದಾಗಿದೆ.

ನಾಗೇಂದ್ರ:
ರಮೇಶ್ ಜಾರಕಿಹೊಳಿ ನಡೆ ಮೇಲೆ ಅವಲಂಬಿತರಾಗಿರುವ ನಾಗೇಂದ್ರ ಅವರು ಬಿಜೆಪಿ ನಾಯಕರನ್ನು ನಂಬಲಾರದ ಸ್ಥಿತಿಯಲ್ಲಿ ಗೊಂದಲದಲ್ಲಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಏನ್ ಮಾಡೋದಪ್ಪಾ ಅನ್ನೋ ಜಿಜ್ಞಾಸೆಯಲ್ಲಿದ್ದಾರೆ.

ಶಿವರಾಂ ಹೆಬ್ಬಾರ್:
ಸಚಿವನಾಗಬೇಕು ಅನ್ನೋ ಆಸೆ ಇದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿ ಶಿವರಾಮ ಹೆಬ್ಬಾರ್ ಇದ್ದಾರೆ. ಸಂಪುಟ ವಿಸ್ತರಣೆ ಆಗ್ತಿರೋದರಿಂದಾಗಿ ಏನೇ ಕಸರತ್ತು ಮಾಡಿದರು ಫಲಿಸಲ್ಲ ಅನ್ನೋ ಭಾವನೆ ಇವರಲ್ಲಿದೆ.

Comments

Leave a Reply

Your email address will not be published. Required fields are marked *