ಡಿಕೆಶಿ ಬ್ಲಡ್ ಡೇಂಜರ್, ಗಂಡಸ್ತನ ಭಾಷೆ ಬಳಸುವುದು ಹಳೆ ಮೈಸೂರು ಭಾಗದಲ್ಲಿ ಸಹಜ- ಸಿ.ಟಿ ರವಿ

ನವದೆಹಲಿ: ಗಂಡಸ್ತನ ಭಾಷೆ ಬಳಸುವುದು ಹಳೆ ಮೈಸೂರು ಭಾಗದಲ್ಲಿ ಸಹಜ, ಅದಕ್ಕೆ ತೋಳು ಏರಿಸಿಕೊಂಡು ಜಗಳಕ್ಕೆ ಹೋಗುವುದು ತಪ್ಪು, ಮಾತಿಗೆ ಮಾತಿನಲ್ಲೇ ಉತ್ತರ ಕೊಡುವುದು ಪ್ರಜಾಪ್ರಭುತ್ವದ ಸೊಗಸು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ನಿನ್ನೆ ರಾಮನಗರದಲ್ಲಿ ನಡೆದ ಸಚಿವ ಅಶ್ವಥ್ ನಾರಾಯಣ ಮತ್ತು ಸಂಸದ ಡಿ.ಕೆ ಸುರೇಶ್ ಜಗಳಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಅಶ್ವಥ್ ನಾರಾಯಣ ಅವರ ಗಂಡಸ್ಥನ ಪದ ಬಳಕೆಯನ್ನು ಸಮರ್ಥಿಸಿಕೊಂಡರು.

ಸಂಸದ ಡಿ.ಕೆ ಸುರೇಶ್, ಸಚಿವರ ಮೇಲೆ ಹಲ್ಲೆಗೆ ಮುಂದಾಗಿರುವುದು ಖಂಡನೀಯ, ಗೂಂಡಾಗಿರಿ ಮೂಲಕ ಅಭಿಪ್ರಾಯ ಭೇದ ಹತ್ತಿಕ್ಕಲು ಸಾಧ್ಯವಿಲ್ಲ, ಸಂಸದರಿಗೆ ಅಭಿವೃದ್ಧಿ ಬಗ್ಗೆ ಹೇಳುವುದಕ್ಕೆ ಅವಕಾಶ ಇತ್ತು ಅದನ್ನು ಬಿಟ್ಟು ಗೂಂಡಾಗಿರಿ, ದೌರ್ಜನ್ಯ ಮೂಲಕ ಹೇಳುವುದಕ್ಕೆ ಹೊಗಿದ್ದಾರೆ ಇದು ಸರಿಯಾದ ನಡೆಯಲ್ಲ ಎಂದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ನಡುವೆ ಜಟಾಪಟಿ

ಡಿ.ಕೆ ಸುರೇಶ್ ನಡೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸುತ್ತಾರೆ ಎಂದುಕೊಂಡಿದ್ದೆ ಆದರೆ ಸಿದ್ದರಾಮಯ್ಯ ಸುರೇಶ್ ನಡೆಯನ್ನು ಖಂಡಿಸಿಲ್ಲ. ತಮ್ಮನ ನಡೆ ಸಮರ್ಥಿಸುವ ಭರದಲ್ಲಿ ನಮ್ಮ ರಕ್ತವೇ ಬೇರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಈ ಮೂಲಕ ಡಿ.ಕೆ ಶಿವಕುಮಾರ್ ತಮ್ಮ ರಕ್ತ ಅಪಾಯಕಾರಿ ರಕ್ತ ಎಂದು ತೋರಿಸಿದ್ದಾರೆ. ಕನಕಪುರದ ರಾಜಕೀಯ ರಾಜ್ಯಕ್ಕೆ ವಿಸ್ತರಿಸಿದರೆ ಪ್ರಜಾಪ್ರಭುತ್ವ ಅಂತ್ಯವಾಗುತ್ತೆ ಎಂದು ಟೀಕಿಸಿದರು. ಇದನ್ನೂ ಓದಿ:  ಮೇಕೆದಾಟು ಪಾದಯಾತ್ರೆಗೆ ಟಫ್‍ರೂಲ್ಸ್ ಅನ್ವಯ – ಬಿಜೆಪಿಯಿಂದ ಷಡ್ಯಂತ್ರ ಎಂದ ಕಾಂಗ್ರೆಸ್‌

ಅಶ್ವಥ್ ನಾರಾಯಣ ಡಿ.ಕೆ ಸುರೇಶ್ ಅವರನ್ನು ಪ್ರೇರೆಪಿಸಿಲ್ಲ, ಅವರನ್ನೇನು ನಿರ್ವೀರ್ಯರು ಅಂತಾ ಹೇಳಿಲ್ಲ, ಗಂಡಸ್ತನ ಎನ್ನುವುದು ಅಸಂಸದೀಯ ಪದ ಅಲ್ಲ ಅದು ಮೈಸೂರು ಭಾಗದಲ್ಲಿ ಸಹಜ ಎಂದು ಹೇಳಿದರು.ಇದನ್ನೂ ಓದಿ:  ರಾಮನಗರ ಶಾಂತಿಯ ಜಿಲ್ಲೆ, ಗೂಂಡಾ ರೀತಿಯ ವರ್ತನೆ ಮಾಡಿದ್ದು ತಪ್ಪು: ಎಚ್‍ಡಿಕೆ ಕಿಡಿ

Comments

Leave a Reply

Your email address will not be published. Required fields are marked *