ಮತ್ತೆ ಕಾಂಗ್ರೆಸ್ ಸೇರಿದ್ರೆ ಆತ್ಮಹತ್ಯೆ ಮಾಡಿಕೊಂಡಂತೆ: ಸಿಪಿವೈ

ರಾಮನಗರ: ನಾನು ಮತ್ತೆ ಡಿಕೆಶಿಯವರ ಜೊತೆ ಕಾಂಗ್ರೆಸ್ ಸೇರಿದರೆ ಆತ್ಮಹತ್ಯೆ ಮಾಡಿಕೊಂಡಂತೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಕಾಂಗ್ರೆಸ್ ಸೇರುವ ಸುದ್ದಿ ಕಪೋಲಕಲ್ಪಿತವಾದದ್ದು, ನನಗೆ ಶಿವಕುಮಾರ್ ರಿಂದ ಕಾಂಗ್ರೆಸ್‍ನಲ್ಲಿ ಕಿರುಕುಳವಾಗಿದೆ. ಎರಡು ಬಾರಿ ನನಗೆ ಕಾಂಗ್ರೆಸ್‍ನಲ್ಲಿ ಟಿಕೆಟ್ ತಪ್ಪಿಸಿದ್ದರು ಎಂದು ದೂರಿದರು. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದರ ನಡುವೆ ನಡೆದ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಸುರೇಶ್ ಕಾರ್ಯಕರ್ತರು ಕಾರ್ಯಕ್ರಮವನ್ನ ಹಾಳು ಮಾಡಿದ್ದಾರೆ. ಅವರಿಗೆ ಕಾರ್ಯಕ್ರಮ ನಡೆಯುವುದು ಇಷ್ಟವಿರಲಿಲ್ಲ. ಅವರ ನಡವಳಿಕೆ ಅವರ ಹಿನ್ನೆಲೆ ತೋರಿಸುತ್ತದೆ. ಅವರ ಈ ಗುಂಡಾಗಿರಿ ವರ್ತನೆ ನಿಲ್ಲಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಸಹ ಅವರಿಗೆ ಸಹಕಾರ ಕೊಡುತ್ತಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

ಹಿಂದೆ ನಾನು ಅರಣ್ಯ ಸಚಿವನಾಗಿದ್ದಾಗ, ಅವರ ಅಕ್ರಮ ಕಲ್ಲಿನ ಕ್ವಾರಿಗಳನ್ನ ಬಂದ್ ಮಾಡಿಸಿದ್ದೆ. ನಂತರ ಯುಪಿಎನಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ನನ್ನ ವಿರುದ್ಧ 25 ಕೇಸ್ ಹಾಕಿಸಿದ್ದರು. ವೀರಪ್ಪ ಮೋಯ್ಲಿ ರವರ ಬಳಿ ಹೋಗಿ ಕೇಸ್ ಹಾಕಿಸಿದ್ದರು. ಆಗ ನಾನು ಮೋಯ್ಲಿಯವರನ್ನ ಭೇಟಿ ಮಾಡಿದ್ದು, ಅವರು ಶಿವಕುಮಾರ್ ಈ ರೀತಿ ಹೇಳಿದ್ದಾರೆ ಅಂದಿದ್ದರು. ಡಿಕೆಶಿಯವರು 7 ಬಾರಿ ಶಾಸಕರಾಗಿದ್ದಾರೆ. ಅವರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *