ಗುಂಡ್ಲುಪೇಟೆಯಲ್ಲಿ ಬಿಜೆಪಿ ಶಕ್ತಿ ನೋಡಿದ್ರೆ ಹೊಟ್ಟೆ ಉರಿಯಾಗುತ್ತೆ, ನಾನ್ಯಾಕೆ ಇಲ್ಲಿಗೆ ಬರ್ಬಾದು ಅನಿಸತ್ತೆ: ವಿಜಯೇಂದ್ರ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾದ ಬೃಹತ್ ಸಮಾವೇಶ ನಡೆಯಿತು. ಸಮಾವೇಶಕ್ಕೆ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಗೆ ಬೈಕ್ ರ್‍ಯಾಲಿ ಮೂಲಕ ಕರೆತಂದ ಕಾರ್ಯಕರ್ತರು ಹೂ ಮಳೆಗೈದು ಅದ್ಧೂರಿ ಸ್ವಾಗತ ಕೋರಿದರು.

ಸಮಾವೇಶ ಉದ್ಘಾಟಿಸಿದ ಬಿ.ವೈ ವಿಜಯೇಂದ್ರ ಗುಂಡ್ಲುಪೇಟೆ ಕಂಡರೆ ನನಗೆ ಹೊಟ್ಟೆ ಉರಿ ಆಗ್ತಿದೆ. ಗುಂಡ್ಲುಪೇಟೆಯಲ್ಲಿ ಬಿಜೆಪಿ (BJP) ಶಕ್ತಿ ನೋಡಿದ್ರೆ ನಾನ್ಯಾಕೆ ಅಲ್ಲಿ ಇಲ್ಲಿ ನಿಲ್ಲೋದಕ್ಕೆ ಒದ್ದಾಡ್ತಿದ್ದೇನೆ? ಇಲ್ಲಿಗೇಕೆ ಬರಬಾರ್ದು ಅನಿಸ್ತಿದೆ ಎಂದು ಮಾರ್ಮಿಕವಾಗಿ ನುಡಿದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮೊದಲ ಫಲಿತಾಂಶ ಬರುವುದೇ ಗುಂಡ್ಲುಪೇಟೆಯಲ್ಲಿ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧಿಸೋದು ಖಚಿತ – ಯತೀಂದ್ರ ಸಿದ್ದರಾಮಯ್ಯ

Comments

Leave a Reply

Your email address will not be published. Required fields are marked *