ಚುನಾವಣೆ ಘೋಷಣೆಯಾದರೂ ಜಿಲ್ಲೆಯತ್ತ ಸುಳಿಯದ ಸಿಪಿ. ಯೋಗೇಶ್ವರ್

ರಾಮನಗರ: ನಗರದಲ್ಲಿ ಉಪಚುನಾವಣೆ ದಿನಾಂಕ ಘೋಷಣೆಯಾದರೂ ಸಿಪಿ ಯೋಗೇಶ್ವರ್ ಅವರು ಮಾತ್ರ ರಾಮನಗರ ಜಿಲ್ಲೆಯತ್ತ ಸುಳಿಯುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸಿಎಂ ಕುಮಾರಸ್ವಾಮಿ ವಿರುದ್ಧ ಸೋಲ್ಲನ್ನಪ್ಪಿದ್ದ ಯೋಗೇಶ್ವರ್ ಅವರು ಸೋಲಿನ ಹತಾಶೆಯಿಂದ ರಾಮನಗರದತ್ತ ಸುಳಿಯುತ್ತಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿದೆ.

ರಾಮನಗರ ಕ್ಷೇತ್ರದಲ್ಲೂ ತನ್ನದೇ ಆದ ಅಭಿಮಾನಿಗಳನ್ನ ಹೊಂದಿರುವ ಯೋಗೇಶ್ವರ್ ಅವರ ಹೆಸರು ಈ ಬಾರಿ ಉಪಚುನಾವಣೆ ಸ್ವರ್ಧೆಗೆ ಕೇಳಿ ಬರುತ್ತಿದೆ. ಆದರೆ ರಾಮನಗರಕ್ಕೆ ಆಗಮಿಸಿ ಪಕ್ಷ ಕಟ್ಟುವಲ್ಲಿ ಯೋಗೇಶ್ವರ್ ಅವರು ಮುಂದಾಗುತ್ತಿಲ್ಲ. ಇದರಿಂದಾಗಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ದೋಸ್ತಿಗೆ ಹೆದರಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ರಾಮನಗರ ಉಪಚುನಾವಣೆ ಸ್ವರ್ಧೆಗೆ ಹಿಂದೇಟು ಹಾಕುತ್ತಿರೋ ಸಿಪಿ ಯೋಗೇಶ್ವರ್ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ರಿಂದ ಪಕ್ಷ ಬಲವರ್ಧನೆ ನಡೆಯುತ್ತಿದ್ರೂ ಬರುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಇನ್ನೂ ಹೊರಬಂದಿಲ್ಲ ಎನ್ನುವ ಮಾತು ಕೇಳಿಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *