ಉಪಸಮರ ಪ್ರಚಾರ ಕಣಕ್ಕೆ ಗಾಲಿ ಜನಾರ್ದನ ರೆಡ್ಡಿ!

-ಗೆಳೆಯನನ್ನು ಬಳ್ಳಾರಿಗೆ ಕರೆತರಲು ಶ್ರೀರಾಮುಲು ಮೆಗಾ ಪ್ಲಾನ್

ಬಳ್ಳಾರಿ: ಕರ್ನಾಟಕ ಲೋಕಸಭೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಗಣಿನಾಡಲ್ಲಿ ಧೂಳೆಬ್ಬಿಸಲು ಪ್ರಚಾರದ ಕಣಕ್ಕೆ ಗಾಲಿ ಜನಾರ್ದನ ರೆಡ್ಡಿ ಸಿದ್ಧರಾಗುತ್ತಿದ್ದಾರೆ.

ತನ್ನ ಗೆಳೆಯ ಜನಾರ್ದನ ರೆಡ್ಡಿಯನ್ನು ಬಳ್ಳಾರಿಗೆ ಕರೆತರಲು ಶಾಸಕ ಶ್ರೀರಾಮುಲು ಮೆಗಾ ಪ್ಲಾನ್ ಮಾಡಿದ್ದು, ರೆಡ್ಡಿ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಡಿಚ್ಚಿ ಹೊಡೆಯಲು ರಾಮುಲು ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಭಾನುವಾರ ಅಥವಾ ಸೋಮವಾರ ಜನಾರ್ದನ ರೆಡ್ಡಿ ಕೋರ್ಟ್ ಮೊರೆ ಹೋಗಲು ತಯಾರಿ ಮಾಡುತ್ತಿದ್ದಾರೆ. ಒಂದು ದಿನದ ಮಟ್ಟಿಗಾದರೂ ಅವಕಾಶ ಕೊಡಿ ಎಂದು ಕೋರ್ಟ್ ನಲ್ಲಿ ಮನವಿ ಮಾಡಿಕೊಳ್ಳಲಿದ್ದಾರಂತೆ. ಇತ್ತ ಕೋರ್ಟ್ ರೆಡ್ಡಿಗೆ ಅವಕಾಶ ಕೊಟ್ಟರೆ ಕಾಂಗ್ರಸ್ಸಿಗೆ ಠಕ್ಕರ್ ಕೊಡಲು ರಾಮುಲು ಪಡೆ ರೆಡ್ಡಿ ಆಗಮನಕ್ಕೆ ಕಾಯುತ್ತಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಈ ಬಾರಿಯ ಉಪಚುನಾವಣೆಗೆ ಶಾಸಕ ಶ್ರೀರಾಮುಲು ಅವರು ಒಬ್ಬರೆ ಏಕಾಂಗಿ ಆಗಿ ಪ್ರಚಾರ ಮಾಡಬೇಕಾಗುತ್ತದೆ. ಯಾಕೆಂದರೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಬಳ್ಳಾರಿಗೆ ಹೋಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ಬಂಧ ಮಾಡಿದೆ. ಆದರೆ ಈಗ ಕೋರ್ಟ್ ಗೆ ಮೋರೆ ಹೋಗುವ ಮೂಲಕ ಮತ್ತೆ ಬಳ್ಳಾರಿಗೆ ಎಂಟ್ರಿ ಕೊಡಲು ಜನಾರ್ದನ ರೆಡ್ಡಿ ಸಿದ್ಧರಾಗುತ್ತಿದ್ದಾರೆ. ಆದರೆ ಕೋರ್ಟ್ ರೆಡ್ಡಿಗೆ ಅವಕಾಶ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಒಂದು ವೇಳೆ ಕೋರ್ಟ್ ಜನಾರ್ದನ ರೆಡ್ಡಿಗೆ ಅವಕಾಶ ಕೊಟ್ಟರೆ, ಉಪಚುನಾವಣೆಯಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಈ ಹಿಂದೆಯೂ ಕೂಡ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ತನ್ನದೇ ಆದ ಸ್ಟ್ಯಾಟರ್ಜಿಯನ್ನು ಬಳಕೆ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *