ಬಸ್‍ಗೆ ಬೋರ್ಡ್ ಹಾಕಿ ಎಂದ ಪ್ರಯಾಣಿಕನಿಗೆ ಕಂಡಕ್ಟರ್‌ನಿಂದ ಬಿತ್ತು ಬೂಟಿನೇಟು

ಯಾದಗಿರಿ: ಬಸ್ ಯಾವ ಕಡೆ ಹೋಗುತ್ತೆ ಎಂಬುದ ಗೊತ್ತಾಗಲು ಬೋರ್ಡ್ ಹಾಕಿ ಎಂದ ಪ್ರಯಾಣಿಕನಿಗೆ ಸರ್ಕಾರಿ ಬಸ್ ಕಂಡಕ್ಟರ್ ಬೂಟ್ ಕಾಲಿನಿಂದ ಒದ್ದು ಥಳಿಸಿದ ಅಮಾನವೀಯ ಘಟನೆ ಯಾದಗಿರಿಯ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೋರ್ವ ಬಸ್ ತೆರಳುವ ಮಾರ್ಗದ ಬೋರ್ಡ್ ಹಾಕಿ ಎಂದು ಅವಾಚ್ಯ ಶಬ್ದಗಳಿಂದ ಕೂಗಾಡಿದ್ದಾನೆ. ಇದರಿಂದಾಗಿ ಕೋಪಗೊಂಡ ಗುರುಮಠಕಲ್ ವಿಭಾಗದ ನಿರ್ವಾಹಕ ಸಿದ್ದಪ್ಪ ಪ್ರಯಾಣಿಕನಿಗೆ ಮನಬಂದಂತೆ ಥಳಿಸಿ, ಬೂಟ್‍ನಿಂದ ಒದ್ದಿದ್ದಾನೆ. ಇದನ್ನೂ ಓದಿ: KSRTC ಬಸ್‍ನಲ್ಲಿ ಕೋಳಿ ಪ್ರಯಾಣ- ಟಿಕೆಟ್ ಕೊಟ್ಟ ನಿರ್ವಾಹಕ

ಇಷ್ಟೇ ಅಲ್ಲದೇ ಪ್ರಯಾಣಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಿದ್ದಪ್ಪ ಅಮಾನವೀಯತೆ ಪ್ರದರ್ಶನ ಮಾಡಿದ್ದಾನೆ. ಕಂಡಕ್ಟರ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೂಡಲೇ ಸೇವೆಯಿಂದ ವಜಾ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ನಿರ್ವಾಹಕ ಬೂಟಿನಿಂದ ಒದೆಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪೊಲೀಸರೇ ಡ್ರಗ್ಸ್ ನೀಡಿದ್ರು – ಶ್ರೀಕಿ ಆರೋಪ ಸುಳ್ಳು

Comments

Leave a Reply

Your email address will not be published. Required fields are marked *