ಬಸ್, ಕಾರು ಡಿಕ್ಕಿ – ಸ್ವಿಫ್ಟ್‌ನಲ್ಲಿದ್ದ 3 ಮಹಿಳೆಯರ ಜೊತೆ ಚಾಲಕ ಸಾವು

ದಾವಣಗೆರೆ: ಕೆಎಸ್‍ಆರ್‌ಟಿಸಿ  ಬಸ್ ಹಾಗೂ ಸ್ವಿಫ್ಟ್ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು,  ಕಾರ್‌ನಲ್ಲಿದ್ದ  3 ಜನ ಮಹಿಳೆಯರ ಜೊತೆ ಚಾಲಕ ಸಾವನ್ನಪ್ಪಿದ ಘಟನೆ ನ್ಯಾಮತಿ ತಾಲೂಕಿನ ಸವಳಂಗ ಬಳಿ ನಡೆದಿದೆ.

ಕಾರು ಚಾಲಕ ಸುನಿಲ್(30), ದ್ರಾಕ್ಷಾಯಿಣಮ್ಮ(40), ಸುಮಾ(45), ಶಾರದಮ್ಮ(65) ಮೃತ ದುರ್ದೈವಿಗಳು. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಏಡೇಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ನ್ಯಾಮತಿ ತಾಲೂಕಿನ ಹಳೇಜೋಗ ಗ್ರಾಮದಲ್ಲಿ ಕಾರ್ಯಕ್ರಮಯೊಂದಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

ಕಾರನಲ್ಲಿದ್ದ ಆಶಾ ಗಂಭೀರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆ ದಾಖಲಾಗಿದ್ದಾರೆ. ಸ್ಥಳಕ್ಕೆ ನ್ಯಾಮತಿ ಠಾಣೆಯ ಸಿಪಿಐ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ರವಾನೆ ಮಾಡಲಾಗಿದೆ. ಇದನ್ನೂ ಓದಿ:  ಶಾಲೆಯಲ್ಲಿ ಮೊಟ್ಟೆ ವಿತರಣೆ ಪರ ಬ್ಯಾಟ್ ಬೀಸಿದ: ರಘುಪತಿ ಭಟ್

Comments

Leave a Reply

Your email address will not be published. Required fields are marked *