ಬಿಎಸ್‍ವೈ ಡೈರಿ ಇಟ್ಕೊಂಡು ಡಿಕೆಶಿ ಚೌಕಾಶಿ – ಸತ್ಯ ಬಿಚ್ಚಿಟ್ಟ ಐಟಿ ಇಲಾಖೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಡೈರಿ ಸಿಕ್ಕಿದ್ದೇ ಸಿಕ್ಕಿದ್ದು, ಒಳಗಿನ ಒಂದೊಂದು ಅಂಶಗಳು ಬಯಲಾಗ್ತಾನೇ ಇವೆ. ಪವರ್ ಫುಲ್ ಮಿನಿಸ್ಟರ್ ಎಂದೇ ಕರೆಸಿಕೊಳ್ಳುವ ಡಿಕೆಶಿ ಅದೊಂದು ಡೈರಿ ಇಟ್ಕೊಂಡು ತಾನು ಬಚಾವಾಗೋಕೆ ಪ್ರಯತ್ನ ಪಟ್ಟಿದ್ದಾರೆ. ನೀವು ಇದನ್ನು ತನಿಖೆ ಮಾಡಲೇಬೇಕು ಇಲ್ಲ ನನ್ನ ತನಿಖೆಯಲ್ಲಿ ರಿಯಾಯಿತಿ ಕೊಡಬೇಕು ಎಂದು ಚೌಕಾಶಿಗಿಳಿದಿದ್ದರು ಎಂಬ ಮಾಹಿತಿ ಲಭಿಸಿದೆ.

ಹೌದು. ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರೋ ಬಿಎಸ್‍ವೈ ಕಪ್ಪ ಕಾಣಿಕೆಯ ಡೈರಿಯದ್ದೇ ಒಂದು ಕಥೆಯಾದ್ರೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ಸೈಡ್‍ಲೈನ್ ಸ್ಟೋರಿ ಕುತೂಹಲ ಹೆಚ್ಚಿಸಿದೆ. ಡಿಕೆ ಶಿವಕುಮಾರ್ ಮನೆಯ ಮೇಲೆ ದಾಳಿ ನಡೆದಾಗ ಯಾರು ಕೂಡ ಆ ಮನೆಯಲ್ಲಿ ಈ ಡೈರಿ ಸಿಕ್ಕಿದೆ ಎಂದು ಊಹೆಯನ್ನು ಮಾಡೋದಕ್ಕೆ ಆಗಿರಲಿಲ್ಲ. ಅದು ಪ್ರತಿಪಕ್ಷ ನಾಯಕರಿಗೆ ಸಂಬಂಧಿಸಿದ್ದ ಡೈರಿ ಡಿಕೆ ಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿತ್ತು. ಆದ್ರೆ, ಈ ಡೈರಿಯನ್ನು ವಶ ಪಡೆಯೋದಕ್ಕೆ ಆಗಲಿ, ತನಿಖೆ ಮಾಡೋದಕ್ಕೆ ಆಗಲಿ ಐಟಿ ಇಲಾಖೆಗೆ ಇಷ್ಟ ಇರ್ಲಿಲ್ಲ. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಡಿಕೆ ಶಿವಕುಮಾರ್ ಅದನ್ನೂ ಸೀಜ್ ಮಾಡಿ ತನಿಖೆ ಮಾಡಬೇಕು ಎಂದು ಹಠ ಹಿಡಿದಿದ್ದರು ಎನ್ನಲಾಗಿದೆ.

ಯಾವಾಗ ಬಿಎಸ್‍ವೈ ಹಸ್ತಾಕ್ಷರ ಇದೆ ಎಂದು ಹೇಳಲಾದ ಡೈರಿಯನ್ನು ತನಿಖೆ ಮಾಡೋದಕ್ಕೆ ಐಟಿ ಇಲಾಖೆ ಒಲವು ತೋರಿಸುತ್ತಾ ಇಲ್ಲವೆಂದು ಗೊತ್ತಾಯ್ತೊ, ಆಗ ಡಿಕೆ ಶಿವಕುಮಾರ್ ಅದನ್ನು ತನಿಖೆ ಮಾಡೋದಿಲ್ಲ ಅನ್ನೋದಾದ್ರೆ ತಮಗೂ ತನಿಖೆಯಲ್ಲಿ ರಿಯಾಯಿತಿ ಕೊಡಿ ಎಂದು ಚೌಕಾಸಿಗೆ ಇಳಿದಿದ್ದರು. ಇದಕ್ಕೆ ಸೊಪ್ಪು ಹಾಕದ ಇಲಾಖೆ ತಮ್ಮ ಕೆಲಸವನ್ನು ತಮ್ಮ ಪಾಡಿಗೆ ನೀಟಾಗಿ ಮಾಡಿತ್ತು ಎಂದು ಐಟಿ ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ.

ಒಟ್ಟಿನಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಬೇಕು ಅಂದುಕೊಂಡಿದ್ದ ಡಿಕೆಶಿ ಚೌಕಾಸಿ ವ್ಯವಹಾರ ವರ್ಕೌಟ್ ಆಗಿಲ್ಲ. ಅತ್ತ ಯಡಿಯ್ಯೂರಪ್ಪಗೂ ಕ್ಲೀನ್ ಚಿಟ್ ಸಿಕ್ಕಿದ್ರೆ, ಇತ್ತ ಡಿಕೆ ಶಿವಕುಮಾರ್ 75 ಕೋಟಿ ಆಸ್ತಿ ಕಳೆದುಕೊಳ್ಳುವಂತಾಗಿದೆ.

Comments

Leave a Reply

Your email address will not be published. Required fields are marked *