ಸರ್ಕಾರಿ ಬಂಗಲೆಗೆ ಹೋಗಲು ಬಿಎಸ್ ಯಡಿಯೂರಪ್ಪ ಹಿಂದೇಟು?

ಬೆಂಗಳೂರು: ಲೋಕೋಪಯೋಗಿ ಸಚಿವ ರೇವಣ್ಣ, ಮುಖ್ಯಮಂತ್ರಿ ಕುಮಾರಸ್ವಾಮಿ ಆಯಿತು, ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರಿ ಬಂಗಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ನಂಬರ್ 3 ಸರ್ಕಾರಿ ಬಂಗಲೆಗೆ ಹೋಗಲು ಬಿಎಸ್ ವೈ ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ನಿವಾಸಕ್ಕೆ ಹೋಗದಿರಲು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ನಿರ್ಧಾರ ಮಾಡಿದ್ದು, ಈ ಬಂಗಲೆಗೆ ಹೋದರೆ ಸಿಎಂ ಪಟ್ಟ ಕಳೆದುಕೊಳ್ಳುವ ಭಯದಿಂದ ವಾಸ್ತುಸರಿ ಇಲ್ಲ ಎಂದು ಸರ್ಕಾರಿ ನಿವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಸರ್ಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸರ್ಕಾರಿ ಬಂಗಲೆ ಕೊಟ್ಟಿತ್ತು. ಆದರೆ ಅದು ವಾಸ್ತು ಪ್ರಕಾರ ಸರಿಯಿಲ್ಲ ಎಂದು ಬಂಗಲೆಯನ್ನು ತ್ಯಜಿಸಿ ತಮ್ಮ ನಿವಾಸದಲ್ಲಿಯೇ ಇದ್ದಾರೆ. ಈವರೆಗೆ ಈ ಬಂಗಲೆಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ವಾಸ್ತವ್ಯ ಇದ್ದರು. ಇದೀಗ ಶಂಕರಮೂರ್ತಿ ಅವರು ಸರ್ಕಾರಿ ನಿವಾಸವನ್ನು ತೆರವುಗೊಳಿಸಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಮೊದಲ ಬಾರಿಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ ನಿವಾಸಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಆದರೆ ಆ ನಿವಾಸ ಸಚಿವ ಸಾ.ರಾ. ಮಹೇಶ್ ಪಾಲಾಗಿತ್ತು. ಆದ್ದರಿಂದ ರೇಸ್ ವ್ಯೂ ಕಾಟೇಜ್ ನಲ್ಲೇ ಮತ್ತೊಂದು ಬಂಗಲೆಯನ್ನು ಸರ್ಕಾರ ಹಂಚಿಕೆ ಮಾಡಿತ್ತು. ಅಂದು ಕೇಳಿದ್ದ ಮನೆ ಸಿಗಲಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಬಂಗಲೆ ತಿರಸ್ಕರಿಸಿದ್ದರು. ಬಳಿಕ ಸರ್ಕಾರ ಕುಮಾರಕೃಪಾ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ಹಂಚಿಕೆ ಮಾಡಿತ್ತು. ಈಗ ಈ ಸರ್ಕಾರಿ ಬಂಗಲೆ ಸುಸ್ಥಿತಿಯಲ್ಲಿ ಇಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಬಂಗಲೆಗೆ ಹೋಗದಿರಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *