ಬೆಳ್ಳಂಬೆಳಗ್ಗೆ ಸಹೋದರರಿಬ್ಬರ ಭೀಕರ ಕೊಲೆ – ಶವಗಳನ್ನ ಬೇರೆ ಬೇರೆ ಕಡೆ ಎಸೆದ ಆರೋಪಿಗಳು

ವಿಜಯಪುರ: ಬೆಳ್ಳಂಬೆಳಗ್ಗೆ ಸಹೋದರರಿಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದು, ಆರೋಪಿಗಳು ಶವಗಳನ್ನು ಬೇರೆ ಬೇರೆ ಕಡೆ ಎಸೆದಿರುವ ಘಟನೆ ವಿಜಯಪುರ ನಗರದ ಜೈ ಕರ್ನಾಟಕ ಕಾಲನಿಯಲ್ಲಿ ನಡೆದಿದೆ.

ಅಣ್ಣ ಸಲೀಂ ಅಬ್ದುಲ ಗಣಿ ಕೋಚಮನ(35) ಹಾಗೂ ತಮ್ಮ ರಜಾಕ್ ಅಬ್ದುಲ್ ಗಣಿ ಕೋಚಮನ(28) ಕೊಲೆಯಾದ ಸಹೋದರರು. ಅಣ್ಣನನ್ನು ಕೊಲೆ ಮಾಡಿ ಜೈ ಕರ್ನಾಟಕ ಕಾಲನಿಯ ಮನೆಯ ಬಳಿಯೇ ಎಸೆದಿದ್ದಾರೆ. ತಮ್ಮನನ್ನು ಕೊಲೆ ಮಾಡಿ ವಿಜಯಪುರ ನಗರದ ಗೋರ್ನಮೆಂಟ್ ಕಾಲೇಜಿನ ಆವರಣದಲ್ಲಿ ಎಸೆದಿದ್ದಾರೆ.

ಸಹೋದರರಿಬ್ಬರು ಕೂಲಿ ಕಾರ್ಮಿಕರಾಗಿದ್ದರು. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಇಬ್ಬರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಜೋಡಿ ಕೊಲೆಯಿಂದ ವಿಜಯಪುರ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಣ್ಣನ ಕೊಲೆ ಮತ್ತು ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮನ ಕೊಲೆ ನಡೆದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *