ಅಣ್ಣನೊಂದಿಗೆ ಕೆರೆ ಸ್ನಾನಕ್ಕೆ ಹೋಗಿದ್ದ ತಮ್ಮ ವಾಪಸ್ ಬರಲೇ ಇಲ್ಲ!

ಮಡಿಕೇರಿ: ಸ್ನಾನಕ್ಕೆಂದು ಅಣ್ಣನೊಂದಿಗೆ ಕೆರೆಗೆ ತೆರಳಿದ್ದ ತಮ್ಮ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

ವಿರಾಜಪೇಟೆ ನಗರದ ಶಾಂತಿ ನಗರದ ನಿವಾಸಿ ಬಿಎಸ್‍ಎಫ್ ನಿವೃತ್ತ ಯೋಧ ದಿವಂಗತ ಮಜೀದ್ ಡಿ.ಎ ಅವರ ಪುತ್ರ ವಿದ್ಯಾರ್ಥಿ ಮೊಹಮ್ಮದ್ ಜೀಯಾನ್ (19) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ. ಜೀಯಾನ್ ತನ್ನ ಅಣ್ಣನೊಂದಿಗೆ ಬುಧವಾರ ಬೆಳಗ್ಗೆ ತೋಟಕ್ಕೆ ಹೋಗಿದ್ದ. ತೋಟದ ಅಂಚಿನಲ್ಲಿರುವ ಕೆರೆಗೆ ಸ್ನಾನ ಮಾಡಲೆಂದು ತೆರಳಿದ್ದಾರೆ. ಈ ವೇಳೆ ನೀರಿನ ಆಳಕ್ಕೆ ಹೋದ ಜೀಯಾನ್ ಮುಳುಗಿದ್ದಾನೆ. ಅಣ್ಣ ನೆರೆಹೊರೆಯವರ ಸಹಾಯದಿಂದ ಪಾರಾಗಿದ್ದು, ಜೀಯಾನ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ

ಯುವಕ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *