ಅಕ್ರಮ ಸಂಬಂಧವಿದೆ ಎಂದು ಅತ್ತಿಗೆ, ಆಕೆಯ ಸಂಬಂಧಿಕರ ಮೇಲೆ ಮೈದುನನಿಂದ ಹಲ್ಲೆ!

ದಾವಣಗೆರೆ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನಗೊಂಡು ಮೈದುನ ತನ್ನ ಅತ್ತಿಗೆ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.

ವೆಂಕಟೇಶ್ ಹಾಗೂ ಸುಶೀಲಾ ಹಲ್ಲೆಗೊಳಗಾದವರಾಗಿದ್ದು, ಮೈದುನ ತಿಮ್ಮೇಶ್ ಸಂತೆಬೆನ್ನೂರಿನಲ್ಲಿ ಪೊಲೀಸ್ ಪೇದೆಯಾಗಿದ್ದಾರೆ. ಸುಶೀಲಾ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಮೊಬೈಲ್ ನಲ್ಲಿ ಬೇರೆಯವರೊಂದಿಗೆ ಬಹಳ ಮಾತನಾಡುತ್ತೀಯಾ ಎಂದು ಅಕ್ರಮ ಸಂಬಂಧ ಇದೆಯೊಂದು ಮೈದುನ ತಿಮ್ಮೇಶ್ ಜಗಳವಾಡಿ ಸಂಬಂಧ ಕಟ್ಟಿದ್ದಾನೆ.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ರಾಜಿ ಸಂಧಾನ ಸಹ ನಡೆದಿತ್ತು. ಆದರೆ ಕಳೆದ ರಾತ್ರಿ ತಿಮ್ಮೇಶ್ ಹಾಗೂ ಆತನ ಅಕ್ಕಂದಿರು ಸೇರಿ ಸುಶೀಲಾ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾದರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರೆ. ಇನ್ನೂ ಮೈದುನ ತಿಮ್ಮೇಶ್ ಹಾಗೂ ಆತನ ಅಕ್ಕಂದಿರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ

Comments

Leave a Reply

Your email address will not be published. Required fields are marked *