ಇಟ್ಟಿಗೆ ಕಾರ್ಖಾನೆ ಚಿಮಿಣಿ ಬಿದ್ದು ಒಂದೇ ಕುಟುಂಬದ ಮೂವರ ಸಾವು

ಕೋಲಾರ: ಇಟ್ಟಿಗೆ ಕಾರ್ಖಾನೆಯ ಚಿಮಿಣಿ ಬಿದ್ದು ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರಾಜ್‍ಪೇಟೆ ಸಮೀಪದಲ್ಲಿ ಇಂದು ಮುಂಜಾನೆ ನಡೆದಿದೆ.

ಜೋಡಿಕೃಷ್ಣ ಪುರಂನ ನಿವಾಸಿಗಳಾದ ಬಾಷಾ(60), ಫಾತಿಮಾ (50) ಮತ್ತು ಐದು ವರ್ಷದ ಅವರ ಮೊಮ್ಮಗ ನಯಾಜ್ ಮೃತ ದುರ್ದೈವಿಗಳು. ಜೈರಾಜ್ ಎಂಬವರಿಗೆ ಸೇರಿದ ಹಳೆಯ ಇಟ್ಟಿಗೆ ಕಾರ್ಖಾನೆ ಇದಾಗಿದ್ದು, ಇತ್ತೀಚಿಗೆ ಮಳೆ ಬೀಳುತ್ತಿರುವ ಪರಿಣಾಮವಾಗಿ ಚಿಮಿಣಿ ಕುಸಿದು ಬಿದ್ದಿದ್ದೆ.

ಚಿಮಣಿಯ ಪಕ್ಕದ ಶೆಡ್ ನಲ್ಲಿ ಮಲಗಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಾಷಾ ಮತ್ತು ಫಾತಿಮಾ ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ. ಈ ಸಂಬಂಧ ಅಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *