ಬ್ಲೇಡ್‍ನಿಂದ ಬಾಲಕನ ಮಾರ್ಮಾಂಗ, ಕತ್ತು ಕೊಯ್ದು ಬರ್ಬರ ಕೊಲೆ!

ಬಾಗಲಕೋಟೆ: ಬಾಲಕನ ಮಾರ್ಮಾಂಗ, ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಬಳಿ ನಡೆದಿದೆ.

4 ವರ್ಷದ ಮುತ್ತಪ್ಪ ಅಮಜಗೋಳ ಕೊಲೆಯಾದ ಬಾಲಕ. ಬ್ಲೇಡ್‍ನಿಂದ ಬಾಲಕನ ಮಾರ್ಮಾಂಗ ಹಾಗೂ ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಕಿವಿಯಲ್ಲಿನ ಕಿವಿಯೋಲೆ, ಉಡದಾರ, ಕೊರಳಲ್ಲಿನ ತಾಯತ, ಕಿತ್ತುಕೊಂಡು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸುತ್ತಿದ್ದು, ನಿಧಿಗಾಗಿ ಬಾಲಕನನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಬನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *