ಸಿಬ್ಬಂದಿಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದ ಬಿಎಂಟಿಸಿ

ಬೆಂಗಳೂರು: ಹೃದಯಾಘಾತದಿಂದ ಸಾವನ್ನಪ್ಪಿದ್ದ ಬಿಎಂಟಿಸಿ ಸಿಬ್ಬಂದಿಯ ಮೃತದೇಹವನ್ನು ಅವರ ಹುಟ್ಟೂರಿಗೆ ರವಾನಿಸಲು ಬಸ್ ನೀಡಿ ಬಿಎಂಟಿಸಿ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.

ರಮೇಶ್(31) ಮೃತ ದುರ್ದೈವಿ. ಅಡಕಮಾರನಹಳ್ಳಿ ಡಿಪೋ 40ರಲ್ಲಿ ರಮೇಶ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನೆಲಮಂಗಲ ಸಮೀಪದ ದಾಸನಪುರದಲ್ಲಿ ಬಳಿ ಇರುವ ಮನೆಯಲ್ಲಿ ಮುಂಜಾನೆ ಹೊತ್ತಿನಲ್ಲಿ ಸಿಬ್ಬಂದಿ ರಮೇಶ್ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ರಮೇಶ್ ಮೃತಪಟ್ಟಿದ್ದರು.

ರಮೇಶ್ ಗಂಗಾವತಿ ತಾಲೂಕಿನ ಚಿರ್ಚನಗುಡ್ಡ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಸಿಬ್ಬಂದಿಯ ಹುಟ್ಟೂರಿನಲ್ಲಿಯೇ ಅಂತಿಮ ಸಂಸ್ಕಾರ ನಡೆಯಲಿದ್ದು, ರಮೇಶ್ ಅವರ ಮೃತದೇಹವನ್ನು ರವಾನಿಸಲು ಬಿಎಂಟಿಸಿ ಅಧಿಕಾರಿಗಳು ಸಂಸ್ಥೆಯ ಬಸ್ಸೊಂದನ್ನು ನೀಡಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ಇತರೇ ಸಿಬ್ಬಂದಿ ಬಸ್‍ನಲ್ಲಿಯೇ ಮೃತದೇಹವನ್ನು ರಮೇಶ್ ಅವರ ಊರಿಗೆ ರವಾನಿಸಿದ್ದಾರೆ. ಈ ಮೂಲಕ ಸಿಬ್ಬಂದಿಗೆ ಸಹಾಯ ಹಸ್ತ ಚಾಚಿ ಬಿಎಂಟಿಸಿ ಮಾನವೀಯತೆ ಮೆರೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *