Giant-Killer – ಹಾಲಿ ಸಿಎಂ ಕೆಸಿಆರ್‌, ಭಾವಿ ಸಿಎಂ ರೇವಂತ್‌ ರೆಡ್ಡಿಯನ್ನೇ ಸೋಲಿಸಿದ ಬಿಜೆಪಿಯ ಅಭ್ಯರ್ಥಿ

ಹೈದರಾಬಾದ್‌: ತೆಲಂಗಾಣದಲ್ಲಿ (Telangana) ಬಿಜೆಪಿಯ ವೆಂಕಟ ರಮಣ ರೆಡ್ಡಿ (Katipally Venkata Ramana Reddy) ಹಾಲಿ ಸಿಎಂ ಕೆ ಚಂದ್ರಶೇಖರ್‌ ರಾವ್‌ (KCR) ಮತ್ತು ಭಾವಿ ಸಿಎಂ ಎಂದೇ ಬಿಂಬಿತರಾಗಿರುವ ಕಾಂಗ್ರೆಸ್ಸಿನ ರೇವಂತ್‌ ರೆಡ್ಡಿ (Revanth Reddy) ಅವರನ್ನು ಸೋಲಿಸಿ Giant-Killer ಆಗಿ ಹೊರ ಹೊಮ್ಮಿದ್ದಾರೆ.

ಕಾಮರೆಡ್ಡಿ (Kamareddy)ವಿಧಾನಸಭಾ ಕ್ಷೇತ್ರದಲ್ಲಿ ಕೆಸಿಆರ್‌ ಮಧ್ಯೆ ಫೈಟ್‌ ನಡೆಯಲಿದೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ವೆಂಕಟ ರಮಣ ರೆಡ್ಡಿ ಜಯಗಳಿಸಿದ್ದಾರೆ. ಇದನ್ನೂ ಓದಿ: ಲೋಕ ಸಮರಕ್ಕೆ ಬೂಸ್ಟ್‌ – ಸೆಮಿಫೈನಲ್‌ ಗೆದ್ದ ಮೋದಿ

 

ಚುನಾವಣೆಯಲ್ಲಿ ವೆಂಕಟ ರಮಣ ರೆಡ್ಡಿ48.7 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದರು. ಉತ್ತರ ತೆಲಂಗಾಣದಲ್ಲಿ ಬರುವ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತದಾರರು 14.73% ಇದ್ದರೆ ಪರಿಶಿಷ್ಟ ಪಂಗಡದವರು 4.67% ಇದ್ದಾರೆ.  ಇದನ್ನೂ ಓದಿ: ತೆಲಂಗಾಣದಲ್ಲಿ ಬಿಆರ್‌ಎಸ್‌ ಸೋಲು – ತನ್ನನ್ನು ತಾನೇ ಟ್ರೋಲ್‌ ಮಾಡಿಕೊಂಡ ಕೆಸಿಆರ್‌ ಪುತ್ರ

2018ರ ಚುನಾವಣೆಯಲ್ಲಿ ಟಿಆರ್‌ಎಸ್‌ನ ಗಂಪ ಗೋವರ್ಧನ್‌ 68,167 ಮತಗಳನ್ನು ಪಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೊಹಮ್ಮದ್‌ ಅಲಿ ಶಬ್ಬೀರ್‌ 63,610 ಮತಗಳನ್ನು ಪಡೆದಿದಿದ್ದರು. ಬಿಜೆಪಿ 15,439 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿತ್ತು.