ಸ್ಥಳೀಯ ನಾಯಕತ್ವ ಮುಖ್ಯ ಅಲ್ಲ, ಅಜೆಂಡಾ ಮುಖ್ಯ: ಕರ್ನಾಟಕದ ಮೇಲೆ ಪರಿಣಾಮ ಏನು?

ಬೆಂಗಳೂರು: ಸ್ಥಳೀಯ ನಾಯಕತ್ವ ಮುಖ್ಯ ಅಲ್ಲ. ಅಜೆಂಡಾ ಮುಖ್ಯ ಎನ್ನುವುದು ಈ ಚುನಾವಣೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಕರ್ನಾಟಕ ಬಿಜೆಪಿ ಮೇಲೆ ಹೈಕಮಾಂಡ್ ಹಿಡಿತ ಹೆಚ್ಚಳವಾಗಲಿದೆ.

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಕರ್ನಾಟಕ ರಾಜಕಾರಣದ ಮೇಲೆ ಭಾರೀ ಪರಿಣಾಮಗಳು ಉಂಟಾಗಬಹುದು ಎಂಬ ವಿಶ್ಲೇಷಣೆಗಳು ನಡೆದಿವೆ. ಇದನ್ನೂ ಓದಿ: ಯುಪಿಯಲ್ಲಿ ‘ಬುಲ್ಡೋಜರ್ ಬಾಬಾ’ ಅಬ್ಬರ – ಮೋದಿ, ಯೋಗಿ ಆರ್ಭಟಕ್ಕೆ ಧೂಳೀಪಟ

ಏನು ಪರಿಣಾಮ?
ಉತ್ತರಾಖಂಡದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬಿಜೆಪಿ ಬದಲಾವಣೆ ಮಾಡಿತ್ತು. ಹೀಗಿದ್ದರೂ ಬಿಜೆಪಿ ಜಯಗಳಿಸಿದೆ. ಸ್ಥಳೀಯ ನಾಯಕತ್ವ ಇಲ್ಲದೇ ಇದ್ದರೂ ಮೋದಿ ಸಾಧನೆಯನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಬಿಜೆಪಿ ಹೋಗಿತ್ತು. ಈ ತಂತ್ರಗಾರಿಕೆಯಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸ್ಥಳೀಯ ನಾಯಕತ್ವ ಮುಖ್ಯ ಅಲ್ಲ. ಅಜೆಂಡಾ ಮುಖ್ಯ ಆದ ಹಿನ್ನೆಲೆಯಲ್ಲಿ ಈ ಮಾಡೆಲ್‌ ಕರ್ನಾಟಕದಲ್ಲೂ ಪ್ರಯೋಗ ಆಗಬಹುದು. ಇದನ್ನೂ ಓದಿ: ಜನರು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನ ಗೆಲ್ಲಿಸಿದ್ದಾರೆ: ಯೋಗಿ

ಕ್ಯಾಬಿನೆಟ್ ಪುನಾಚರಚನೆಯಾದಲ್ಲಿ ಸಂಘ ನಿಷ್ಠ, ಪಕ್ಷ ನಿಷ್ಠ, ಕಠೋರ ಹಿಂದುತ್ವವಾದಿಗಳಿಗೆ ಮಣೆ ಹಾಕುವ ಸಾಧ್ಯತೆಯಿದೆ.

ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಹೈಕಮಾಂಡ್‌ ನಿರ್ಧಾರವೇ ಅಂತಿಮವಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಉತ್ತರದ ಅಲೆ ನಂಬಿ ಅವಧಿಗೆ ಮುನ್ನವೇ ಚುನಾವಣೆಗೆ ರಾಜ್ಯ ಸರ್ಕಾರ ಮುಂದಾದರೂ ಅಚ್ಚರಿಯಿಲ್ಲ.

Comments

Leave a Reply

Your email address will not be published. Required fields are marked *