ಕುಮಾರಸ್ವಾಮಿ ಸರ್ಕಾರ ಬೀಳಿಸಲು ಪೊಲೀಸ್ ಅಸ್ತ್ರ ಪ್ರಯೋಗಿಸಿದ ಬಿಜೆಪಿ!

ಬೆಂಗಳೂರು/ಮಂಡ್ಯ: ಎಚ್‍ಡಿ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಬಿಜೆಪಿ `ಪೊಲೀಸ್’ ಅಸ್ತ್ರ ಪ್ರಯೋಗಿಸಿದೆ. ಪೊಲೀಸ್ ಅಧಿಕಾರಿಯೊಬ್ಬರ ಮೂಲಕ ಜೆಡಿಎಸ್‍ನ ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡರನ್ನು ತನ್ನತ್ತ ಸೆಳೆದುಕೊಂಡಿದೆ.

ನಾರಾಯಣ ಗೌಡ ಅವರು ಮುಂಬೈನಲ್ಲಿ ಹೋಟೆಲ್, ಲಾಡ್ಜ್ ಸೇರಿದಂತೆ ಉದ್ಯಮ ಹೊಂದಿದ್ದು, ಸದ್ಯ ಬಿಜೆಪಿ ತೆಕ್ಕೆಯಲ್ಲಿ ಇದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇತ್ತ ದೇವೇಗೌಡರಿಗೆ ಕೈ ಕೊಟ್ಟಿರುವ ಕೆ ಆರ್ ಪೇಟೆ ಶಾಸಕ ನಾರಾಯಣಗೌಡ ಎಲ್ಲಿದ್ದಾರೆ ಅನ್ನೋದೇ ಗೊತ್ತಿಲ್ಲ. ನಿನ್ನೆ ಅಧಿವೇಶನಕ್ಕೆ ಬಾರದೇ ಗೈರಾಗಿದ್ದ ಶಾಸಕ ಜೆಡಿಎಸ್ ಮುಖಂಡರ ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ಬುಧವಾರ ಇಬ್ಬರು ಸಚಿವರು ನೀಡಿರುವ ವಿಭಿನ್ನ ಹೇಳಿಕೆ ಇದಕ್ಕೆ ಪುಷ್ಠಿ ನೀಡಿತ್ತು. ನಾರಾಯಣ ಗೌಡ ಮುಂಬೈನಿಂದ ವಿಮಾನದಲ್ಲಿ ಬರುತ್ತಿದ್ದಾರೆ ಅಂತ ಎಚ್.ಡಿ.ರೇವಣ್ಣ ಹೇಳಿದ್ರೆ, ನಾರಾಯಣ ಗೌಡ ಬೆಂಗಳೂರಿನಲ್ಲೇ ಇದ್ದಾರೆ ಅಂತ ಸಚಿವ ಪುಟ್ಟರಾಜು ತಿಳಿಸಿದ್ದರು. ಹೀಗಾಗಿ ಈ ಗೊಂದಲ ಸೃಷ್ಟಿಯಾಗಿತ್ತು. ಅನಾರೋಗ್ಯದ ನೆಪದಲ್ಲಿ ನಿನ್ನೆ ಸದನಕ್ಕೆ ಗೈರಾಗಿದ್ದ ಶಾಸಕ ನಾರಾಯಣ ಗೌಡ ಇಂದು ಕೂಡ ಸದನಕ್ಕೆ ಬರುವುದು ಅನುಮಾನ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *