ಇಂದಿರಾ ಕ್ಯಾಂಟೀನ್‍ನಲ್ಲಿ ಭ್ರಷ್ಟಾಚಾರ ಹೇಗೆ ನಡೆಯುತ್ತಿದೆ: ದಾಖಲೆಯೊಂದಿಗೆ ಅಕ್ರಮ ಬಿಚ್ಚಿಟ್ಟ ರಾಮದಾಸ್

ಬೆಂಗಳೂರು: ಇಂದಿರಾ ಕ್ಯಾಂಟೀನ್ ಅವ್ಯವಹಾರ ದಾಖಲೆಗಳನ್ನು ನೀಡಲು ಮುಂದಾಗಿದ್ದೆ, ಈ ವೇಳೆ ಆಡಳಿತ ಪಕ್ಷವು ಹಿಟ್ ಅಂಡ್ ರನ್ ಅಂತ ಹೇಳಿತು. ಆದರೆ ಇದು ಹಿಟ್ ಅಂಡ್ ರನ್ ಅಲ್ಲ, ಹಿಟ್ ಅಂಡ್ ಕ್ಯಾಚ್ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ವ್ಯಂಗ್ಯವಾಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಹಾರದ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಆದರೆ ದಾಖಲೆಗಳ ಸಮೇತ ಆರೋಪ ಮಾಡುವಂತೆ ಸರ್ಕಾರ ಸೂಚಿಸಿತ್ತು. ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಾನು ದಾಖಲೆಗಳ ಸಮೇತ ಬಂದಿದ್ದೆ. ಹೀಗಾಗಿ ಇವತ್ತು ಕಲಾಪದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು ಅಂತಾ ಎಂದು ಮನವಿ ಮಾಡಿದ್ದೆ. ಇದಕ್ಕೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಅವಕಾಶ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿರಾ ಕ್ಯಾಂಟೀನ್ ಹಗರಣ ಸಂಬಂಧ ಹೈಕೋರ್ಟ್ ನಲ್ಲಿ ದೂರು ನೀಡುತ್ತೇನೆ. ಅಕ್ರಮಕ್ಕೆ ಒಂದು ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ಮಾಡುತ್ತೇನೆ ಎಂದು ಅವರು ಗರಂ ಆಗಿಯೇ ಮಾತನಾಡಿದರು.

ರಾಮದಾಸ್ ಆರೋಪಗಳೇನು?
ರಾಜ್ಯದಲ್ಲಿ 308 ಇಂದಿರಾ ಕ್ಯಾಂಟೀನ್‍ಗಳು ಇದ್ದು, ಪ್ರತಿನಿತ್ಯ 6.75 ಲಕ್ಷ ಮಂದಿಗೆ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ತಿಂಗಳು ಇದಕ್ಕಾಗಿ 24 ಕೋಟಿ ರೂ. ನೀಡುತ್ತದೆ. ಆದರೆ ಸರಾಸರಿ ಕೇವಲ 100 ರಿಂದ 150 ಮಂದಿ ಮಾತ್ರ ಅನುಕೂಲ ಆಗುತ್ತಿದೆ. ಲೆಡ್ಜ್‍ರಗಳನ್ನು ಇಟ್ಟು ಲೆಕ್ಕಕೊಡದೇ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ. ಹೊರ ರಾಜ್ಯದವರಿಗೆ ಮಾತ್ರ ಇಂದಿರಾ ಕ್ಯಾಂಟೀನ್‍ಗಳಲ್ಲಿ ಕೆಲಸ ಕೊಟ್ಟಿದ್ದಾರೆ. ಒಂದೇ ದಿನ ಎರಡು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಒಂದು ಒಪ್ಪಂದದಲ್ಲಿ 57 ರೂ., 60 ರೂ. ರೀತಿ ಒಪ್ಪಂದ ಆಗಿದೆ. ದಿನಕ್ಕೆ ಮೂರು ಹೊತ್ತಿನ ಒಂದು ಊಟಕ್ಕೆ ಈ ದರ ಕೊಟ್ಟಿದ್ದಾರೆ. ಹೆಚ್ಚಳವಾಗಿರುವ ಹಣದಲ್ಲಿ ಯಾರಿಗೆ ಕಿಕ್‍ಬ್ಯಾಕ್ ಹೋಗುತ್ತದೆ ಎನ್ನುವುದನ್ನ ಸ್ಪಷ್ಟಪಡಿಸಬೇಕು. ದುಬೈ ಮೂಲದ ಕೆಇಎಫ್, ಇನ್‍ಫ್ರಾ ಲಿಮಿಟೆಡ್‍ಗೆ ಗುತ್ತಿಗೆ ನೀಡಿ ಅಕ್ರಮ ಎಸಗಲಾಗುತ್ತಿದೆ ಎಂದು ಎಂದು ಆರೋಪಿಸಿದರು.

Comments

Leave a Reply

Your email address will not be published. Required fields are marked *