ಕಬಡ್ಡಿ ಆಡಲು ಹೋಗಿ ಶಾಸಕ ರಾಮಣ್ಣ ಲಮಾಣಿ ಭುಜಕ್ಕೆ ಗಾಯ

ಗದಗ: ಜಿಲ್ಲೆಯ ಒಂದಡೆ ಪ್ರವಾಹ ಬಂದು ನೆರೆ ಸಂತ್ರಸ್ತರು ಸಂಕಟ ಪಡುತ್ತಿದ್ದರೆ, ಮತ್ತೊಂದೆಡೆ ಶಾಸಕರು ಕಬಡ್ಡಿ ಆಡಿ ಮಸ್ತಿ ಮಾಡಿದ್ದಾರೆ.

ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಕಬಡ್ಡಿ ಆಡುವ ಮೂಲಕ ಸ್ಥಳೀಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರವಾಹದಿಂದ ಜನ ಬೇಸತ್ತಿದರೆ, ಶಾಸಕರು ಮಸ್ತಿ ಮಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಶಿರಹಟ್ಟಿ ತಾಲೂಕಿನ ಹಡಗಲಿ ಗ್ರಾಮದಲ್ಲಿ ಶ್ರೀವೀರಭದ್ರೇಶ್ವರ ಜಾತ್ರೆ ಅಂಗವಾಗಿ ಕಬಡ್ಡಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಓಪನಿಂಗ್ ರೇಡ್ ಮಾಡಲು ಹೋಗಿ ಲಮಾಣಿ ಮುಗ್ಗರಿಸಿ ಬಿದ್ದಿದ್ದು, ಭುಜಕ್ಕೆ ಗಾಯವಾಗಿದೆ.

Comments

Leave a Reply

Your email address will not be published. Required fields are marked *