ಧಗಧಗ ಹೊತ್ತಿ ಉರಿಯಿತು ಬರೋಬ್ಬರಿ 16 ಕೋಟಿಯ ಐಶಾರಾಮಿ ಬಂಗಲೆ!

ಬೆಂಗಳೂರು: ಅಗ್ನಿ ಅನಾಹುತದಲ್ಲಿ ಮಾಗಡಿ ಬಿಜೆಪಿ ಅಧ್ಯಕ್ಷರಿಗೆ ಸೇರಿದ್ದ ಕೋಟ್ಯಂತರ ರೂಪಾಯಿಯ ಐಶಾರಾಮಿ ಬಂಗಲೆ ಹೊತ್ತುರಿದ ಘಟನೆ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗ್ರಾಮದಲ್ಲಿ ಇಂದು ನಡೆದಿದೆ.

ಮಾಗಡಿ ಬಿಜೆಪಿ ಅಧ್ಯಕ್ಷ ರಂಗಧಾಮಯ್ಯನ ಅವರಿಗೆ ಈ ಬಂಗಲೆ ಸೇರಿದ್ದು, ಬರೋಬ್ಬರಿ 16 ಕೋಟಿ ರೂ. ಖರ್ಚು ಮಾಡಿ ರಂಗಧಾಮಯ್ಯನವರು ಈ ಐಶಾರಾಮಿಯಾಗಿ ಬಂಗಲೆ ನಿರ್ಮಿಸಿದ್ದರು. ಆದರೆ ಇಂದು ದೇವರ ಪೂಜೆಗಾಗಿ ಬಂಗಲೆಯೊಳಗೆ ಹಚ್ಚಿಟ್ಟಿದ್ದ ದೀಪದಿಂದ ಈ ಭಾರಿ ಅವಘಡ ಸಂಭವಿಸಿದೆ.

ಈಗಾಗಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ಅಗ್ನಿ ಅನಾಹುತದಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಆದ್ರೆ ಬಂಗಲೆಯೊಳಗಿದ್ದ ಹಲವು ಬೆಲೆಬಾಳುವ ವಸ್ತುಗಳು ಹಾಗೂ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು ಸುಟ್ಟು ಸಾಕಷ್ಟು ನಷ್ಟವಾಗಿದೆ.

ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *