ಕಾಂಗ್ರೆಸ್ ವಿರುದ್ಧ ಕಮ್ಯೂನಲ್ ಅಸ್ತ್ರ ಪ್ರಯೋಗಿಸಿದ ಬಿಜೆಪಿ

ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದಲ್ಲಿ ಮತದಾನಕ್ಕೆ ಇರೋದು ಇನ್ನು ಕೇವಲ 9 ದಿನ. ಈ ಹೊತ್ತಲ್ಲಿ ಮತಗಳ ಧೃವೀಕರಣಕ್ಕಾಗಿಯೇ ಏನೋ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಮ್ಯೂನಲ್ ಕಾರ್ಡ್ ಎಂಬ ಅಸ್ತ್ರ ಪ್ರಯೋಗಿಸಿದ್ದಾರೆ.

ಕಾಂಗ್ರೆಸ್ ನಾಯಕರು, ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘಿಸಿ ಧರ್ಮದ ಹೆಸರಲ್ಲಿ ಮತ ಕೇಳುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ಬಿಜೆಪಿ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ನಿತಿನ್ ಗಡ್ಕರಿ ನೇತೃತ್ವದ ಕೇಂದ್ರ ಸಚಿವರ ನಿಯೋಗ ಬುಧವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರುಗಳ ಸುರಿಮಳೆ ಸುರಿಸಿದೆ. ಅಧಿಕಾರ ದುರುಪಯೋಗ, ಮಾಧ್ಯಮಗಳ ಮೇಲೆ ಒತ್ತಡ ಹೇರುವಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ನೀಡಿರುವ ದೂರಿನ ಪ್ರಮುಖಾಂಶಗಳು ಇಂತಿವೆ:
* ಇಸ್ಲಾಂ ಹೆಸರಲ್ಲಿ ಕಾಂಗ್ರೆಸ್‍ಗೆ ವೋಟ್ ಮಾಡುವಂತೆ ಖರ್ಗೆ, ಗುಲಾಂ ನಬಿ ಆಜಾದ್ ಪ್ರಚಾರ
* ನೀವು ಕಾಂಗ್ರೆಸ್‍ಗೆ ವೋಟ್ ಹಾಕಿದರೆ ಅದು ಅಲ್ಲಾಹುವಿನ ಸೇವೆ ಆಗುತ್ತೆ ಅಂತಾ ಪ್ರಚಾರ
* ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಧರ್ಮದ ಆಧಾರದಲ್ಲಿ ಮತ ಕೇಳುವುದು ಪ್ರಜಾ ಪ್ರತಿನಿಧಿ ಕಾಯ್ದೆಗೆ ವಿರುದ್ಧ

* ಸಿದ್ದರಾಮಯ್ಯ ಸರ್ಕಾರದ ಕೈಗೊಂಬೆಯಾಗಿದೆ ರಾಜ್ಯ ಚುನಾವಣಾ ಆಯೋಗ
* ಕೇವಲ ಬಿಜೆಪಿಯವರ ಮೇಲೆ ಮಾತ್ರ ಕೇಸ್ ಹಾಕಲಾಗುತ್ತಿದ್ದು, ಹಣ ಸೀಜ್ ಮಾಡಲಾಗುತ್ತಿದೆ
* ಕಾಂಗ್ರೆಸ್ ನಾಯಕರ ಪ್ರಚಾರ ವಾಹನಗಳ ಸಂಚಾರಕ್ಕೆ ಅಧಿಕಾರಿಗಳು ಮುಕ್ತ ಅವಕಾಶ ನೀಡಿದ್ದಾರೆ

* ಮತ ಗಿಟ್ಟಿಸಲು ಕಾಂಗ್ರೆಸ್ ನಾಯಕರು ಸಿಕ್ಕಾಪಟ್ಟೆ ಹಣ ಚೆಲ್ಲುತ್ತಿದ್ದು, ಇದನ್ನು ನೋಡಿಯೂ ಅಧಿಕಾರಿಗಳು ಸುಮ್ಮನಿದ್ದಾರೆ
* ಬಿಜೆಪಿ ವಿರುದ್ಧದ ಸುದ್ದಿಗಳನ್ನು ಮಾತ್ರ ಬಿತ್ತರಿಸುವಂತೆ ಮಾಧ್ಯಮಗಳ ಮೇಲೆ ಕಾಂಗ್ರೆಸ್ ಒತ್ತಡ ಹಾಕುತ್ತಿದೆ
* ಅಧಿಕಾರಿಗಳನ್ನು ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ
* ಕಾಂಗ್ರೆಸ್ ನಿರ್ದೇಶನದ ಮೇರೆಗೆ ಉಡುಪಿಯಲ್ಲಿ ದೇವಾಲಯಗಳ ಮೇಲಿನ ಕೇಸರಿ ಧ್ವಜಗಳನ್ನು ಬಲವಂತವಾಗಿ ತೆಗೆಸಿದ್ದಾರೆ

Comments

Leave a Reply

Your email address will not be published. Required fields are marked *