ಬಿಜೆಪಿ 4ನೇ ಪಟ್ಟಿ ಬಿಡುಗಡೆ: ಯಶವಂತಪುರದಿಂದ ಜಗ್ಗೇಶ್ ಕಣಕ್ಕೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ 4ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ಬದಾಮಿ, ವರುಣಾ ಕ್ಷೇತ್ರದಿಂದ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ.

ಯಶವಂತಪುರದಿಂದ ಜಗ್ಗೇಶ್, ಬೇಲೂರಿನಿಂದ ಎಚ್.ಕೆ.ಸುರೇಶ್, ಹಾಸನದಿಂದ ಪ್ರೀತಂ ಗೌಡ, ರಾಮನಗರ ದಿಂದ ಎಚ್.ಲೀಲಾವತಿ, ಕನಕಪುರ ದಿಂದ ನಂದಿನಿ ಗೌಡ, ಬಿಟಿಎಂ ಲೇಔಟ್ ನಿಂದ ಲಲ್ಲೇಶ್ ರೆಡ್ಡಿ, ಭದ್ರಾವತಿ ಯಿಂದ ಜಿ.ಆರ್.ಪ್ರವೀಣ್ ಪಾಟೀಲ್ ಕಣಕ್ಕೆ ಇಳಿಯಲಿದ್ದಾರೆ.

ರಾಜ್ಯಾಧ್ಯಕ್ಷ , ಸಂಸದರಾದ ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಈ ಬಾರಿ ಕಣಕ್ಕಿಳಿಯಲಿರುವ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಏಪ್ರಿಲ್ 8ರಂದು ಬಿಡುಗಡೆ ಮಾಡಿತ್ತು.

ಏಪ್ರಿಲ್ 16 ರಂದು ಬಿಜೆಪಿ ಎರಡನೆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ 82 ಮಂದಿಗೆ ಟಿಕೆಟ್ ಸಿಕ್ಕಿತ್ತು. 59 ಮಂದಿಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಏಪ್ರಿಲ್ 20 ರಂದು ಬಿಡುಗಡೆ ಮಾಡಿತ್ತು.

 

Comments

Leave a Reply

Your email address will not be published. Required fields are marked *